ವಿಜಯಪುರ: ಶಾದಿ ಭಾಗ್ಯ ಎಂಬ ಮನೆಹಾಳು ಯೋಜನೆ ಜಾರಿ ಮಾಡಿದ್ದು ಸಿದ್ದರಾಮಯ್ಯ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ವಾಗ್ದಾಳಿ ನಡೆಸಿದರು.
ಸಿಂದಗಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಪರ ಚುನಾವಣಾ ಪ್ರಚಾರ ನಡೆಸಿ ಅವರು ಮಾತನಾಡಿದರು. ಒಂದು ಸಮುದಾಯದ ಅನುಕೂಲಕ್ಕಾಗಿ ಶಾದಿ ಭಾಗ್ಯ ಎಂಬ ಮನೆಹಾಳು ಯೋಜನೆಯನ್ನು ಸಿದ್ದರಾಮಯ್ಯ ಜಾರಿಗೆ ತಂದರು.
ಇದು ಕೇವಲ ಒಂದು ಸಮುದಾಯಕ್ಕಾಗಿ ಮಾತ್ರ ಬೇರೆ ಯಾವುದೇ ಸಮಾಜದ ಜನರಿಗಾಗಿ ತಂದಿಲ್ಲ. ಅಲ್ಲಿಯೂ ಒಂದು ಸಮುದಾಯದ ಓಲೈಕೆ ರಾಜಕಾರಣ ನಡೆಸಿದರು ಎಂದು ದೂರಿದರು.
ಶಾಲಾ ಮಕ್ಕಳ ಪ್ರವಾಸ ಕಾರ್ಯಕ್ರಮದಲ್ಲಿಯೂ ವಿಷಬೀಜ ಬಿತ್ತಿದ್ದವರು ಸಿದ್ದರಾಮಯ್ಯ. ಮಕ್ಕಳನ್ನು ದೇವರ ಸಮಾನ ಎನ್ನುತ್ತಾರೆ ಆದರೆ ಅಲ್ಲಿಯೂ ಜಾತಿ ಆಧಾರದ ಮೇಲೆ ಪ್ರವಾಸ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಯಿತು. ಈ ಮೂಲಕ ಚಿಕ್ಕಪುಟ್ಟ ಮಕ್ಕಳಲ್ಲಿಯೂ ಜಾತಿ ವಿಷಬೀಜ ಬಿತ್ತುವ ಕೆಲಸ ಮಾಡಿದರು.
ಕಾಂಗ್ರೆಸ್ ನಾಯಕರು ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ. ಸಿಂದಗಿಯಲ್ಲಿಯೂ ಜಾತಿ ಆಧಾರದ ಮೇಲೆ ಮತ ಕೇಳಲು ಮುಂದಾಗಿದ್ದಾರೆ ಎಂದು ಟೀಕಿಸಿದರು.