ವಿಜಯಪುರ: ನಗರ ಸೇರಿದಂತೆ ಜಿಲ್ಲೆಯ ಕೆಲ ಭಾಗದಲ್ಲಿ ಶನಿವಾರ ತಡ ರಾತ್ರಿ ಎರಡು ಬಾರಿ, ಭಯಂಕರ ಶಬ್ದದೊಂದಿಗೆ ಭೂಮಿ ಕಂಪಿಸಿದಕ್ಕೆ ಜನರು ತೀವ್ರ ಆತಂಕಗೊಳ್ಳುವಂತಾಗಿದೆ.
ಶನಿವಾರ ರಾತ್ರಿ 11.48 ಹಾಗೂ 11.52 ರ ಹೊತ್ತಿಗೆ, ಎರಡು ಬಾರಿ ನಗರ ಸೇರಿದಂತೆ ಜಿಲ್ಲೆಯ ಕೆಲ ಭಾಗದಲ್ಲಿ ಭಯಂಕರ ಶಬ್ದದೊಂದಿಗೆ, ಭೂಮಿಕಂಪನಗೊಂಡಿದ್ದು, ಜನರು ಮನೆಯಿಂದ ಆಚೆ ಓಡಿ ಬಂದು, ಜಾಗರಣೆ ಮಾಡುವಂತಾಯಿತು.
ನಗರದ ಶಿಕಾರಖಾನೆ, ಇಂಡಿ ರಸ್ತೆಯ ಪರಮೇಶ್ವರ ನಗರ, ಕನಕದಾಸ ಬಡಾವಣೆ, ಬಸವನಗರ, ಗಣೇಶ ನಗರ, ರಾಮನಗರ ಸೇರಿದಂತೆ ಜಿಲ್ಲೆಯ ಮನಗೂಳಿ, ಉಕ್ಕಲಿ ತಳೇವಾಡ ಸೇರಿದಂತೆ ಹಲವು ಗ್ರಾಮಗಳಲ್ಲಿ ಜನರಿಗೆ ಭೂಕಂಪನದ ಅನುಭವವಾಗಿದ್ದು, ಇದರಿಂದ ಭೀತಿಗೊಳ್ಳುವಂತಾಗಿದೆ.