ವಿಜಯಪುರ: ನನ್ನ ಕಂಡರೆ ಸಿದ್ದರಾಮಯ್ಯಗೆ ಭಯ, ಅದಕ್ಕೆ ಪದೇ ಪದೆ ಜೆಡಿಎಸ್ ಬಗ್ಗೆ ಮಾತನಾಡುತ್ತಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಸಿಂದಗಿಯ ಬೊಮ್ಮನಹಳ್ಳಿ ಗ್ರಾಮದಲ್ಲಿ ಮಂಗಳವಾರ, ಸಿದ್ದರಾಮಯ್ಯ ಕಂಡರೆ ಭಯ ಎನ್ನುವ ವಿಚಾರ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯಿಸಿ, ನಾನ್ಯಾಕೆ ಅವರಿಗೆ ಭಯ ಪಡಲಿ, ನನ್ನ ಕಂಡರೆ ಅವರಿಗೆ ಭಯ. ಅವರು ಮಾತಾಡದೇ ಇದ್ದರೆ ನಾನು ಯಾಕೆ ಮಾತಾಡಲಿ ? ನಾನು ಅವರಿಗೆ ಹೆದರಲ್ಲ, ಅವರೇ ನನಗೆ ಹೆದರುತ್ತಾರೆ ಎಂದರು.
ಬಿ.ಎಸ್. ಯಡಿಯೂರಪ್ಪ, ಸಿದ್ದರಾಮಯ್ಯ ಭೇಟಿ ಆರೋಪ ವಿಚಾರ ಕುರಿತು ಪ್ರತಿಕ್ರಿಯಿಸಿ, ಅವರು ಇಲ್ಲ ಅಂತ ಹೇಳುತ್ತಾರೆ, ನಾನೇನು ಬ್ಯಾಟರಿ ಹಚ್ಚಿ ಹುಡುಕೋಕಾಗುತ್ತಾ ? ಮುಂದಿನ ದಿನಗಳಲ್ಲಿ ಪರದೆ ಮೇಲೆ ಬರುತ್ತೆ, ಆವಾಗ ಅರ್ಥವಾಗುತ್ತೆ ಬಿಡಿ ಎಂದರು.
ಆರ್ಎಸ್ಎಸ್ ಶಾಖೆಯಲ್ಲಿ ಕಲಿತಿದ್ದಾರಲ್ವಾ ಅದು ನನಗೆ ಬೇಡ. ಆ ಶಾಖೆಯಲ್ಲಿ ಕಲಿತವರು ವಿಧಾನ ಸಭೆಯಲ್ಲಿ ನೀಲಿ ಚಿತ್ರ ನೋಡಿದ್ದಾರೆ. ಅಲ್ಲಿ ಏನೇನು ಮಾಡಿದ್ದಾರೆ ಅನ್ನೊದು ಎಲ್ಲರಿಗೂ ಗೊತ್ತಿದೆ. ಹೀಗಾಗಿ ನನಗೆ ಆ ಶಾಖೆಯಲ್ಲಿ ಕಲಿಯೋದು ಬೇಡ. ನನಗೆ ಈ ಜನರ ಜೊತೆಗೆ ಕಲಿಯುವುದಷ್ಟೇ ಸಾಕು ಎಂದರು.