ವಿಜಯಪುರ, ; ಇಲ್ಲಿಗೆ ಸಮೀಪದ ಬೋಳೆಗಾಂವ ಗ್ರಾಮದಲ್ಲಿ ತನ್ನ ತಾಯಿಯ ಹಲ್ಲಿನ ಸೆಟ್ ಮುರಿದಳು ಎನ್ನುವ ಕ್ಷುಲಕ ಕಾರಣಕ್ಕೆ ಮುಗ್ಧ ಆರು ವರ್ಷದ ಬಾಲಕಿಯನ್ನು ಕೊಲೆ ಮಾಡಿದ ತನ್ನ ಆರೋಪಿಯನ್ನು ಪೊಲೀಸರು ಮಿಂಚಿನ ತನಿಖೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸಣ್ಣ ವಿಷಯಕ್ಕೆ ಬದುಕಿ ಬಾಳಬೇಕಾದ ಮಗುವನ್ನು ಕೊಲೆ ಮಾಡಿದ ಘಟನೆಗೆ ಇಡೀ ಜಿಲ್ಲೆಯೇ ಕಣ್ಣೀರು ಹಾಕುವಂತಾಗಿದೆ. ಈ ಕೃತ್ಯವೆಸಗಿ ಏನೂ ಆಗದವರಂತೆ ಓಡಾಡುತ್ತಿದ್ದ ಆರೋಪಿಯನ್ನು ಪೊಲೀಸರು ಅತ್ಯಂತ ಚಾಣಾಕ್ಷತನದಿಂದ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯನ್ನು ಬೋಳೇಗಾಂವ ಗ್ರಾಮದ ಸಂಗನಗೌಡ ಬಾಬುಗೌಡ ಬಿರಾದಾರ ಎಂದು ಗುರುತಿಸಲಾಗಿದೆ. ಆರೋಪಿ ಕಳೆದ 9 ರಂದು ಅಪ್ರಾಪ್ತ ಬಾಲಕಿಯನ್ನು ಪ್ರಜ್ಞೆತಪ್ಪಿಸಿ ನಿರ್ದಯವಾಗಿ ಕೊಲೆ ಮಾಡಿ ಗೊಬ್ಬರ ಚೀಲದಲ್ಲಿ ಹಾಕಿ ಶವವನ್ನು ಒಂದು ಕಡೆ ಹೂತಿಟ್ಟಿದ್ದ, ಈ ಕುರಿತು ಹೊರ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ತಾಯಿಯ ಹಲ್ಲಿನ ಸೆಟ್ ಮುರಿದಿದ್ದಕ್ಕೆ ಆರು ವರ್ಷದ ಬಾಲಕಿಯ ಕೊಲೆ ಮಾಡಿದ ದುಷ್ಕರ್ಮಿಯ ಬಂಧನ
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.