News Karnataka Kannada
Monday, April 29 2024
ಹಾವೇರಿ

ಪ್ರಾಣಿ, ಪಕ್ಷಿಕಳಿಗಾಗಿ ವರದಾ ನದಿಯನ್ನೆ ತುಂಬಿಸಲು ಹೊರಟ ರೈತ

ಮಳೆರಾಯನ ಮುನಿಸಿನಿಂದ ನೆಲ ಕಾದ ಹಂಚಂತಾಗಿದೆ.ನೀರಿಲ್ಲದೆ ಬರಗಾಲ ಬಂದು ಹೊಕ್ಕಿದೆ. ಇತ್ತ ರೈತ ಮಳೆರಾಯನ ಮುನಿಸಿನಿಂದ ಬೆಳೆಗಳನ್ನು ಕಾಪಡಿಕೊಳ್ಳಲು ಹರಸಾಹಸ ಪಡುತ್ತಿದ್ದಾನೆ ಇನ್ನೊಂದೆಡೆ ಕುಡಿಯಲು ನೀರಿಲ್ಲದೆ ಪರಿತಪಿಸುತ್ತಿದ್ದಾನೆ. ಪ್ರಾಣಿ, ಪಕ್ಷಿಗಳ ಒದ್ದಾಟ ಹೇಳತೀರದು ನೀರಿಗಾಗಿ ದೇವರಲ್ಲಿ ಪ್ರಾರ್ಥಿಸುತ್ತಿವೆಯೊ ಎಂಬಂತೆ ಕೂಗಾಡುತ್ತ ಇವೆ. ಇಂತಹ ಸಮಯದಲ್ಲಿ ರೈತನೊಬ್ಬ ವರದಾ ನದಿಯನ್ನು ತುಂಬಿಸುವ ಮೂಲಕ ಪ್ರಾಣಿ ಪಕ್ಷಿಗಳ ದಾಹ ನೀಗಿಸುವ ಪ್ರಯತ್ನಕ್ಕೆ ಇಳಿದಿದ್ದಾನೆ.
Photo Credit : NewsKarnataka

ಹಾವೇರಿ: ಮಳೆರಾಯನ ಮುನಿಸಿನಿಂದ ನೆಲ ಕಾದ ಹಂಚಂತಾಗಿದೆ.ನೀರಿಲ್ಲದೆ ಬರಗಾಲ ಬಂದು ಹೊಕ್ಕಿದೆ. ಇತ್ತ ರೈತ ಮಳೆರಾಯನ ಮುನಿಸಿನಿಂದ ಬೆಳೆಗಳನ್ನು ಕಾಪಡಿಕೊಳ್ಳಲು ಹರಸಾಹಸ ಪಡುತ್ತಿದ್ದಾನೆ ಇನ್ನೊಂದೆಡೆ ಕುಡಿಯಲು ನೀರಿಲ್ಲದೆ ಪರಿತಪಿಸುತ್ತಿದ್ದಾನೆ. ಪ್ರಾಣಿ, ಪಕ್ಷಿಗಳ ಒದ್ದಾಟ ಹೇಳತೀರದು ನೀರಿಗಾಗಿ ದೇವರಲ್ಲಿ ಪ್ರಾರ್ಥಿಸುತ್ತಿವೆಯೊ ಎಂಬಂತೆ ಕೂಗಾಡುತ್ತ ಇವೆ. ಇಂತಹ ಸಮಯದಲ್ಲಿ ರೈತನೊಬ್ಬ ವರದಾ ನದಿಯನ್ನು ತುಂಬಿಸುವ ಮೂಲಕ ಪ್ರಾಣಿ ಪಕ್ಷಿಗಳ ದಾಹ ನೀಗಿಸುವ ಪ್ರಯತ್ನಕ್ಕೆ ಇಳಿದಿದ್ದಾನೆ.

ತಾಲ್ಲೂಕಿನ ಸಂಗೂರು ಗ್ರಾಮದ ರೈತ ಭುವನೇಶ್ವರ ಸ್ವಂತ ಹಣದಿಂದ ಪ್ರಾಣಿ, ಪಕ್ಷಿಗಳ ದಾಹ ತೀರಿಸಲು ಮುಂದಾಗಿದ್ದಾರೆ. ಮಳೆಗಾಲದಲ್ಲಿ ಮೈದುಂಬಿ ಹರಿಯುತ್ತಿದ್ದ ವರದಾ ನದಿ ಮಳೆ ಇಲ್ಲದೆ ಬರಿದಾಗಿದೆ. ಬರೋಬ್ಬರಿ 1 ಲಕ್ಷದ 60 ಸಾವಿರ ರೂಪಾಯಿ ಖರ್ಚು ಮಾಡಿ ಬೋರ್‌ವೆಲ್ ಕೊರೆಸಿ ನೀರನ್ನು ನೇರವಾಗಿ ಸಂಗೂರು ಗ್ರಾಮದ ಪಕ್ಕದಲ್ಲಿರುವ ವರದಾ ನದಿಗೆ ಬಿಡುತ್ತಿದ್ದಾರೆ.


ದಿನಕ್ಕೆ ಆರು ತಾಸಿನಂತೆ ಕಳೆದ ಐದು ದಿನಗಳಿಂದ ನಿರಂತರ ನೀರು ವರದಾ ನದಿಗೆ ಬಿಡಲಾಗುತ್ತಿದೆ. ಈಗಾಗಲೇ ಅರ್ಧ ಅಡಿಯಷ್ಟು ನದಿಯಲ್ಲಿ ಸಂಗ್ರಹವಾಗಿದೆ. ಇದರಿಂದಾಗಿ ವರದಾ ನದಿಯ ನೀರಿನ ಮೇಲೆ ಅವಲಂಬಿಸಿರುವ ಸಾವಿರಾರು ಪಕ್ಷಿಗಳಿಗೆ ಅನುಕೂಲವಾಗಿದೆ.ಜಿಲ್ಲೆಯಾದ್ಯಂತ ರೈತ ಮಾಡಿರುವ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತದೆ, ಅಲ್ಲದೆ ರೈತನ ಕಾರ್ಯಕ್ಕೆ ಜಿಲ್ಲಾಧಿಕಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಏನೆ ಆಗಲಿ ರೈತನ ಸಹಾಯಕ್ಕೆ ಮತ್ತು ಆತನ ಹರಸಾಹಸಕ್ಕೆ ತಲೆಬಾಗಲೇಬೇಕು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
53230
Newskarnataka

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು