ಹಾವೇರಿ : ರಾಜ್ಯದಲ್ಲಿ ಮತ್ತೊಂದು ಸಾಮೂಹಿಕ ಆತ್ಮಹತ್ಯೆ ದುರಂತ ಸಂಭವಿಸಿದ್ದು, ಹಾವೇರಿ ತಾಲ್ಲೂಕಿನ ಆಲದಕಟ್ಟಿಯಲ್ಲಿ ರೈತ ಕುಟುಂಬದ ಮೂವರು ಆತ್ಮಹತ್ಯೆಗೆ ಯತ್ನಿಸಿದ್ದು , ಆಲದಕಟ್ಟೆ ಗ್ರಾಮದ ರೈತ ಶಂಕ್ರಪ್ಪ ಕೊಡೆಪ್ಪ ಅಗಡಿ ತಮ್ಮ ಹೊಲದಲ್ಲಿ ನೇಣಿಗೆ ಶರಣಾಗಿದ್ದಾರೆ. ಇಬ್ಬರು ಮೃತಪಟ್ಟಿದ್ದು, ಒಬ್ಬರು ಚಿಂತಾಜನಕ ಸ್ಥಿತಿಯಲ್ಲಿದ್ದಾರೆ.
ಅವರ ಪತ್ನಿ ವಾಣಿಶ್ರೀ ಮತ್ತು ಮಗಳು ಕೀರ್ತಿ ವಿಷ ಸೇವಿಸಿದ್ದು, ವಾಣಿಶ್ರೀ ಮೃತಪಟ್ಟಿದ್ದಾರೆ. ಮಗಳು ಕೀರ್ತಿ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.