ಗದಗ: ಜಿಲ್ಲೆಯ ನರಗುಂದದಲ್ಲಿ ಸಹೋದರನ ಸಾವಿನಿಂದ ಆಘಾತಕ್ಕೊಳಗಾಗಿದ್ದ ಅಕ್ಕ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ.
ಕಸಬಾ ಬಡಾವಣೆ ನಿವಾಸಿ 53 ವರ್ಷದ ಈರಪ್ಪ ಯಮನಪ್ಪ ಬೆಳವಣಿಕಿ ಎಂಬವರು ಮಂಗಳವಾರದಂದು ಮೃತಪಟ್ಟಿದ್ದು, ಅವರ ಶವಸಂಸ್ಕಾರಕ್ಕಾಗಿ ಅಕ್ಕ(80 ವರ್ಷದ) ಬಾಳವ್ವ ರಾಮದುರ್ಗ ತಾಲೂಕಿನ ಗೊಡಚಿಯಿಂದ ಬಂದಿದ್ದರು.
ಸಹೋದರನ ಸಾವಿನಿಂದ ತೀವ್ರವಾಗಿ ನೊಂದಿದ್ದ ಅವರು ಅಲ್ಲಿಯೇ ಸಾವನ್ನಪ್ಪಿದ್ದಾರೆ.