News Karnataka Kannada
Monday, April 29 2024
ಗದಗ

ಒಣ ಮೆಣಸು ಬೆಲೆ ಧಿಡೀರ್‌ ಕುಸಿತ : ರೈತ ಕಂಗಾಲು

ಈಗಾಗಲೇ ಭೀಕರ ಬರಗಾಲದಿಂದ ಬೇಸತ್ತ ರೈತರು ಛಲ ಬಿಡದೆ ಒಣ ಮೆಣಸಿಕಾಯಿ ಬೆಳೆ ಬೆಳೆದಿದ್ದಾರೆ. ನೀರಿನ ಸಂಕಷ್ಟ ಎದುರಿಸುತ್ತಿರುವ ರೈತರು ಬೆಳೆಗಳಿಗೆ ಟ್ಯಾಂಕರ್‌ ಮೂಲಕ ನೀರು ಹಾಕಿ ಮೆಣಸಿನಕಾಯಿ ಬೆಳದಿದ್ದಾರೆ. ಆರಂಭದಲ್ಲಿ ಚಿನ್ನದ ಬೆಲೆ ಇದ್ದ ಒಣ ಮೆಣಸಿಗೆ ಈಗ ಧಿಡೀರ್‌ ಬೆಲೆ ಕುಸಿದು ರೈತರು ಕಂಗಾಲಾಗಿದ್ದಾರೆ.
Photo Credit : News Kannada

ಗದಗ: ಈಗಾಗಲೇ ಭೀಕರ ಬರಗಾಲದಿಂದ ಬೇಸತ್ತ ರೈತರು ಛಲ ಬಿಡದೆ ಒಣ ಮೆಣಸಿಕಾಯಿ ಬೆಳೆ ಬೆಳೆದಿದ್ದಾರೆ. ನೀರಿನ ಸಂಕಷ್ಟ ಎದುರಿಸುತ್ತಿರುವ ರೈತರು ಬೆಳೆಗಳಿಗೆ ಟ್ಯಾಂಕರ್‌ ಮೂಲಕ ನೀರು ಹಾಕಿ ಮೆಣಸಿನಕಾಯಿ ಬೆಳದಿದ್ದಾರೆ. ಆರಂಭದಲ್ಲಿ ಚಿನ್ನದ ಬೆಲೆ ಇದ್ದ ಒಣ ಮೆಣಸಿಗೆ ಈಗ ಧಿಡೀರ್‌ ಬೆಲೆ ಕುಸಿದು ರೈತರು ಕಂಗಾಲಾಗಿದ್ದಾರೆ.

ಕಳೆದ ಹದಿನೈದು ದಿನಗಳ ಹಿಂದೆ ಒಂದು ಕ್ವಿಂಟಾಲ್ ಒಣ ಮೆಣಸಿನಕಾಯಿಗೆ 60 ರಿಂದ 70 ಸಾವಿರಕ್ಕೂ ಹೆಚ್ಚು ಬೆಲೆಗೆ ಮಾರಾಟವಾಗಿತ್ತು. ಆದರೆ ಈಗ ಒಂದು ಕ್ವಿಂಟಾಲ್‌ಗೆ 10 ರಿಂದ 12 ಸಾವಿರ ಬೆಲೆ ಸಿಗುತ್ತಿದೆ. ಬ್ಯಾಡಗಿ ಮಾರುಕಟ್ಟೆಯಲ್ಲಿ ಹೆಚ್ಚು ಗದಗ ಜಿಲ್ಲೆಯ ಮೆಣಸಿನಕಾಯಿ ಮಾರಾಟವಾಗುತ್ತವೆ. ಇತ್ತ ಬರಗಾಲದಿಂದ ನೀರಿನ ಕೊರತಯಿಂದ ಬೇಸತ್ತ ರೈತರಿಗೆ ಮೆಣಸಿಕಾಯಿಯನ್ನು ರಕ್ಷಣೆ ಮಾಡುವುದು ಇನ್ನೊಂದು ಸವಾಲಾಗಿತ್ತು ಇಲಿ,ಹುಳುಗಳ ಕಾಟದಿಂದ ಮೆಣಸಿನ ಬಣ್ಣ ಬದಲಾಗಿದ್ದರೆ ಉತ್ತಮ ಬೆಲೆ ಕೂಡ ಸಿಗುತ್ತಿರಲಿಲ್ಲ.

ಹೀಗಾಗಿ ಒಂದು ಚೀಲಕ್ಕೆ ಒಂದು ತಿಂಗಳಿಗೆ 30 ರೂಪಾಯಿ ಹಣ ಕೊಟ್ಟು ಕೋಲ್ಡ್‌ ಸ್ಟೋರೇಜ್​ನಲ್ಲಿ ಸ್ಟಾಕ್ ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ ಕೇವಲ 3 ಕೋಲ್ಡ್‌ ಸ್ಟೊರೇಜ್‌ಗಳಿದ್ದು ಅದರಲ್ಲಿ 2 ಭರ್ತಿಯಾಗಿದ್ದು ಇನ್ನೊಂದು ಇನ್ನೆರಡು ದಿನದಲ್ಲಿ ಭರ್ತಿಆಗಲಿದೆ ಹಾಗಾಗಿ ಉಳಿದ ಮೆಣಸನ್ನು ಎಲ್ಲಿ ರಕ್ಷಣೆ ಮಾಡುವುದು ಎಂಬ ಗೊಂದಲದಲ್ಲಿ ರೈತರಿದ್ದಾರೆ. ಈ ಕಾರಣ ಮೆಣಸಿಕಾಯಿಗೆ ಬೆಂಬಲ ಬೆಲೆ ನೀಡಿ ಕೂಡಲೆ ಖರೀದಿಸಬೇಕು ಎಂದು ರೈತರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು