ಗದಗ: ಅಯೋಧ್ಯ ಬಾಲರಾಮನ ಪ್ರಾಣಪ್ರತಿಷ್ಠಾಪನೆ ಇಂದು ನಡೆಯಲಿದೆ. ಈ ನಡುವೆ ಅಯೋಧ್ಯೆ ರಾಮಮಂದಿರ ಫೋಟೋದ ಮೇಲೆ ಪಾಕಿಸ್ತಾನ ಧ್ವಜವನ್ನಿಟ್ಟು ಸೋಶಿಯಲ್ ಮಿಡಿಯಾದಲ್ಲಿ ಪೋಸ್ಟ್ ಮಾಡಿದ ಘಟನೆ ನಡೆದಿದೆ. ಗದಗ ಜಿಲ್ಲೆ ಗಜೇಂದ್ರಗಡ ಪಟ್ಟಣದ ಮುಸ್ಲಿಂ ಯುವಕ ಈ ಕೃತ್ಯ ಮಾಡಿದ್ದಾನೆ.
ತೌಜುದ್ದೀನ್ ದಫೇದಾರ್ ಯುವಕ ಈ ಕೃತ್ಯವೆಸಗಿದ್ದಾನೆ. ಅಯೋಧ್ಯೆ ರಾಮಮಂದಿರ ಗೋಪುರದ ಮೇಲೆ ಹಸಿರು ಧ್ವಜ ಹಾಕಿ ಪೋಸ್ಟ್ ಮಾಡಿದ್ದಾನೆ. ಮುಸ್ಲಿಂ ಧರ್ಮದ ಸಂಕೇತವಿರುವ ಧ್ವಜದ ಚಿತ್ರ ಹಾಕಿ ಬಾಬ್ರಿಮಜ್ಜೀದ್ ಎಂದು ಬರೆದು ಪೋಸ್ಟ್ ಮಾಡಿದ್ದಾನೆ. ಈ ಘಟನೆ ಮುನ್ನೆಲೆಗೆ ಬಂದಂತೆ ತಕ್ಷಣ ತೌಜುದ್ದೀನನ್ನ ಗಜೇಂದ್ರಗಡ ಪೊಲೀಸರು ವಶಕ್ಕೆ ಪಡೆದಿದ್ದಾರೆ.