ಗದಗ: ಪೋಕ್ಸೊ ಕಾಯ್ದೆ ಅಡಿಯಲ್ಲಿ ಜೈಲು ಸೇರಿದ್ದ ಯುವಕ ತನಗೆ ಬೇಲು ಸಿಗುವುದಿಲ್ಲ ಎಂದು ಭಾವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದ ಜಿಲ್ಲಾ ಕಾರಾಗೃಹದಲ್ಲಿ ಶುಕ್ರವಾರ ಬೆಳಗಿನ ಜಾವ ನಡೆದಿದೆ.
ತಾಲ್ಲೂಕಿನ ಅಡವಿಸೋಮಾಪುರ ತಾಂಡಾದ ರಾಜು ಲಮಾಣಿ (19) ಮೃತ ದುರ್ದ್ಯವಿಯಾಗಿದ್ದಾನೆ. ಆದರೆ ವಿಧಿಯಾಟ ಹೇಗಿದೆ ನೋಡಿ, ಗುರುವಾರ ಸಂಜೆಯೇ ವಿಚಾರಣಾದೀನ ಖೈದಿಯಾಗಿದ್ದ ರಾಜು ಲಮಾಣಿ ಅವರಿಗೆ ಬೇಲ್ ಸಿಕ್ಕಿತ್ತು, ಆದರೆ, ಕೋರ್ಟ್ ವೇಳೆ ಮುಗಿದಿದ್ದರಿಂದ ಬೇಲ್ ಸಿಕ್ಕಿರುವ ಮಾಹಿತಿ ಕಾರಾಗೃಹಕ್ಕೆ ಹೋಗಿರಲಿಲ್ಲ. ಇದನ್ನು ಅರಿಯದ ಯುವಕ ತನಗೆ ಬೇಲ್ ಸಿಕ್ಕಿಲ್ಲ ತನಗೆ ಪಿಯುಸಿ ಪರೀಕ್ಷೆ ಬರೆಯಲು ಸಾದ್ಯವಿಲ್ಲ ತನ್ನ ಜೀವನ ಇಲ್ಲಿಗೆ ಮುಗಿಯಿತು ಎಂದು ಭಾವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಅಪ್ರಾಪ್ತ ಬಾಲಕಿಯನ್ನು ಪ್ರೀತಿಸುತ್ತಿದ್ದ ರಾಜು ಲಮಾಣಿ ಆಕೆಯ ಮೇಲೆ ದೌರ್ಜನ್ಯ ಎಸಗಿದ ಆರೋಪದ ಮೇಲೆ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು