ಹುಬ್ಬಳ್ಳಿ : ಒಂದು ಕ್ಷೇತ್ರಕ್ಕಾಗಿ ಈ ರೀತಿ ನಿರ್ಬಂಧವಾಗಿ ವಿರುವುದು ನನ್ನ ಜೀವನದಲ್ಲಿ ನೋಡಿಲ್ಲಾ. ಕೇಂದ್ರ ಮಂತ್ರಿ ದಿನನಿತ್ಯ ಇಲ್ಲೇ ಕುಳಿತು ನಮ್ಮ ಜೊತೆ ಯಾರು ಬರತ್ತಾರೋ ಅವರಿಗೆ ಬೆದರಿಕೆ ಹಾಕುವುದು ಮಾಡುತ್ತಿದ್ದಾರೆ. ಮೇ 10 ಕ್ಕೆ ಮತದಾನ 13ಕ್ಕೆ ರಿಸಲ್ಟ್ ಬರಲಿದೆ. ಇದಕ್ಕೆ ಆಗ ಅಂತ್ಯ ದೊರೆಯಲಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದರು.
ನಗರದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ರೀತಿ ನಡವಳಿಕೆ ಪ್ರಜಾಪ್ರಭುತ್ವಕ್ಕೆ ಧಕ್ಕೆಯಾಗಲಿದೆ. ಬೇರೆಯವರು ಗೊಂಡಾಗಿರಿ ಮಾಡತ್ತಾರೆ, ಮನಿ ಪವರ್ ಯಿಂದ ಇಲೆಕ್ಷನ್ ಯಿಂದ ನಡೆಯುತ್ತದೆ, ಎಂದು ಬೇರೆ ಅವರಿಗೆ ಬುದ್ದಿ ಹೇಳುತ್ತಿದ್ದರು. ಈಗ ಅವರೇ ಮಾಡುತ್ತೀದ್ದಾರೆ. ಕಾರ್ಪೊರೇಟ್ ರಿಗೆ ಧಮಕಿ ಹಾಕುತ್ತಿದ್ದಾರೆ. ಇದು ಒಳ್ಳೆ ಬೆಳವಣಿಗೆ ಅಲ್ಲಾ . ಮುಂದೆ ಜನ ಅವರಿಗೆ ಉತ್ತರ ಕೊಡುತ್ತಾರೆ. ಅವರಿಗೆ ಹತಾಶೆ ಭಾವನೆ ಪ್ರಾರಂಭವಾಗಿದೆ. ದಿನಾ ನನ್ನ ಮನೆಗೆ ಯಾರು ಬರುತ್ತಾರೆ, ಯಾರೋ ಹೋಗುತ್ತಾರೆ ಎಂಬ ಮಾಹಿತಿ ಪಡೆದುಕೊಳ್ಳುತ್ತಾರೆ. ಇದರಿಂದ ಏನು ಮಾಡುತ್ತೀರಿ ಎಂದು ಪ್ರಶ್ನಿಸಿದರು.