ಹುಬ್ಬಳ್ಳಿ: ಕುಮಾರಸ್ವಾಮಿ ಅವರ ಫೆನ್ ಡ್ರೈವ್ ನಲ್ಲಿ ಏನು ಹುರುಳಿಲ್ಲ. ಬುಟ್ಟಿಯಲ್ಲಿ ಹಾವಿಟ್ಟು ಹಾವಿದೆ ಹಾವಿದೇ ಎಂದು ಹೆದರಿಸುವ ಮೂಲಕ ಕುಮಾರಸ್ವಾಮಿ ಹತಾಶರಾಗಿದ್ದಾರೆ ಎಂದು ಸಚಿವ ಶಿವರಾಜ್ ತಂಗಡಗಿ ಹೇಳಿದರು.
ನಗರದಲ್ಲಿ ಸುದ್ದುಗೋಷ್ಠಿಯಲ್ಲಿ ಮಾತನಾಡಿದ ಅವರು , ವರ್ಗಾವಣೆ ಎಲ್ಲ ಸರ್ಕಾರದ ಅವಧಿಯಲ್ಲಿಯೂ ಆಗಿದೆ. ಸರಿಯಾದ ದಾಖಲಾತಿ ನೀಡದೆ ಹರಾಜು ಪ್ರಕ್ರಿಯೆ ಎಂದು ಹೇಳುವುದು ಸರಿಯಲ್ಲ. ಬಿಜೆಪಿ, ಜೆಡಿಎಸ್ ಗೆ ವಿನಂತಿ ಮಾಡಿಕೊಳ್ಳುತ್ತೇನೆ. ನಮಗೆ 1 ರಿಂದ 2 ವರ್ಷ ಆಡಳಿತ ಮಾಡಲು ಬಿಡಿ. ಈಗ ಕೇವಲ ಮೂರು ತಿಂಗಳ ಪೂರ್ಣ ಗೊಂಡಿದೆ. 2 ಪಕ್ಷಕ್ಕೆ ಸಮಾಧಾನವೇ ಇಲ್ಲ. ಕುಮಾರ ಸ್ವಾಮಿ ಕಾಲದಲ್ಲಿ ವರ್ಗಾವಣೆ ಆಗಿಲ್ಲಾ. ಹಿಟ್ ಆ್ಯಂಡ್ ರನ್ ಯಾಕೆ ಮಾಡುವುದು ಎಂದರು.