ಹುಬ್ಬಳ್ಳಿ: ಬಿಜೆಪಿಯವರ ಪ್ರೀಡಿಕ್ಸನ್ ಮೊದಲಿನಂದಲೂ ಇದೆ. 2024 ರಲ್ಲಿ ಮೋದಿ ಸರ್ಕಾರ ಈ ದೇಶದಲ್ಲಿ ಇರುವುದಿಲ್ಲ ಎಂದು ಪ್ರಿಡಿಕ್ಸನ್ ಇದೆ. ಏನು ಆಗುತ್ತೇ ನೋಡೊಣ. ಯಾವ ಶಾಸಕರು ಕಾಂಗ್ರೆಸ್ ಗೆ ಬಂದರೆ ನಾವು ಸ್ವಾಗತ ಮಾಡುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭೆ ಚುನಾವಣೆಗೆ ನಮ್ಮ ಸಿದ್ಧತೆ ನಡೆದಿದೆ. ನಮ್ಮ ಕಾರ್ಯಕರ್ತರು ಮನೆ ಮನೆಗೆ ಹೋಗಿ ಭೇಟಿ ನೀಡಿದ್ದಾರೆ. ಬಿಜೆಪಿ ಕರ್ಮಕಾಂಡವನ್ನು ಮನೆ ಮನೆಗೆ ಮುಟ್ಟಿಸುತ್ತಿದ್ದೇವೆ. ಇಡೀ ರಾಜ್ಯದಲ್ಲಿ ಪಾರ್ಟಿ ಬಿಲ್ಡಿಂಗ್ ಕಟ್ಟಿದ್ದಾರೆ ಒಂದು ಆಸ್ಪತ್ರೆಯನ್ನು ಕಟ್ಟಿಲ್ಲಾ ಅದು ಜನರಿಗೆ ಗೊತ್ತಾಗುತ್ತದೆ. INCOME TAX ವರದಿ ನಾನು ಓದಿದ್ದೇನೆ ಅದರಲ್ಲಿ ಯಾವುದೇ ರಾಜಕೀಯ ಲಿಂಕ್ ಇಲ್ಲಾ. ಬಿಜೆಪಿ, ಕಾಂಗ್ರೆಸ್ ದುಡ್ಡು ಅಂತ ತನಿಖೆ ಮಾಡುವುದು ಅವರ ಕೈಯಲ್ಲಿಇದೆ. 10 ವರ್ಷಗಳ ಹಿಂದೆ ಅವರ ತನಿಖೆ ಮಾಡುತ್ತಿದ್ದಾರೆ ಆದರೆ ಒಬ್ಬರು ಜೈಲಿಗೆ ಹೋಗಿಲ್ಲ.
ಕಳೆದ ಮೂರು ತಿಂಗಳಯಿಂದ 36 ಸಾವಿರ ಕೋಟಿ ಖರ್ಚು ಮಾಡಿದ್ದೇವೆ. ಯಾವುದೇ ಅಭಿವೃದ್ಧಿ ಕಾರ್ಯ ಸ್ಥಗಿತ ಆಗಿಲ್ಲಾ. ಬಿಜೆಪಿ 100 ಕೋಟಿ ಅನುದಾನದಲ್ಲಿ 500 ಕೋಟಿ ಅನುದಾನಕ್ಕೆ ಟೆಂಡರ್ ಕರೆದಿದ್ದಾರೆ.