ಹುಬ್ಬಳ್ಳಿ: ವಿಧಾನಸಭೆ ಚುನಾವಣೆಗೆ ಇದುವರೆಗೂ ಬಿಜೆಪಿ ಪಟ್ಟಿ ಪ್ರಕಟಣೆ ಮಾಡಿಲ್ಲಾ ಅಂದ್ರೆ ನೀವೇ ಅರ್ಥ ಮಾಡಿಕೊಳ್ಳಬೇಕು. ಇತ್ತೀಚಿನ ದಿನಗಳಲ್ಲಿ ಫಿಲ್ಮ್ ಸ್ಟಾರ್ ಗಳನ್ನು ಕರಿಸಿ ಪ್ರಚಾರ ಮಾಡುತ್ತಿದ್ದಾರೆ. ಬಿಜೆಪಿ ಅವರಿಗೆ ನರೇಂದ್ರ ಮೋದಿ ಅವರಂತಹ ನಾಯಕರನ್ನು ಬಿಟ್ಟರೆ ಬೇರೆ ಸಮರ್ಥ ನಾಯಕರಿಲ್ಲ. ಮತ್ತೆಲ್ಲರೂ ಫಿಲ್ಮ್ ಸ್ಟಾರ್ ಫೇಸ್ ಅಷ್ಟೇ. ಅವರ ಕಾರ್ಯಕ್ರಮದಲ್ಲಿ ಜನಗಳು ಸೇರುತ್ತಾರೆ ಅದಕ್ಕಾಗಿ ಹೊಸ ಪ್ರಯತ್ನ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಸಂತೋಷ್ ಲಾಡ್ ಹೇಳಿದರು.
ಕಾಂಗ್ರೆಸ್ ಪಕ್ಷದಿಂದ ಕಲಘಟಗಿ ಕ್ಷೇತ್ರಕ್ಕೆ ಹೆಸರು ಬಿಡುಗಡೆಯಾದ ನಂತರ ಹುಬ್ಬಳ್ಳಿ ವಿಮಾನ ನಿಲ್ದಾಣ ದಲ್ಲಿ ಮಾತನಾಡಿದ ಅವರು, ನಾನು 10 ವರ್ಷ ಗಳ ಕಾಲ ಕೆಲಸ ಮಾಡಿದ್ದಾನೆ. ನಮ್ಮ ಸರ್ಕಾರ ಇದ್ದಾಗ ಮಾಡಿರುವಂತಹ ಕಾರ್ಯಕ್ರಮ ಗಳು. ಕೇಂದ್ರದಲ್ಲಿ ನಮ್ಮ ಸರ್ಕಾರ ಇದ್ದಾಗ ಮಾಡಿದ ಕಾರ್ಯಕ್ರಮಗಳನ್ನು ಜನರಿಗೆ ತಿಳಿಸಲಾಗುವುದು. ಕರ್ನಾಟಕ ಜನತೆ ಬಿಜೆಪಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದರು.
ಕಾಂಗ್ರೆಸ್ ಬಾಬಾ ಸಾಹೇಬ್ ಅಂಬೇಡ್ಕರ್ ಗೆ ಅವಮಾನ ಮಾಡಿದೆ, ಬಾಬು ಜಗಜೀವನ ಅವರಿಗೆ ಅವಮಾನ ಆರೋಪ ಕ್ಕೆ ಪ್ರತಿಕ್ರಿಯಿಸಿ, ಆರೋಪ ಮಾಡುವುದು ಬಿಟ್ಟು ಬೇರೆ ಅವರಿಗೆ ಏನು ಗೊತ್ತಿಲ್ಲ ಎಂದರು.