News Karnataka Kannada
Monday, April 29 2024
ಹುಬ್ಬಳ್ಳಿ-ಧಾರವಾಡ

ಸೌಜನ್ಯ ಸಾವಿನ ಪ್ರಕರಣವನ್ನು ವ್ಯವಸ್ಥಿತವಾಗಿ ಮುಚ್ಚಿಹಾಕುವ ಕೆಲಸವಾಗ್ತಿದೆ: ಮುತಾಲಿಕ್‌

You won't build a house worth Rs 10 crore: Muthalik at Soujanya protest
Photo Credit : News Kannada

ಹುಬ್ಬಳ್ಳಿ: ಕರ್ನಾಟಕದಲ್ಲಿ 40 ಸಾವಿರ ಮಹಿಳೆಯರು ಕಾಣೆಯಾಗಿದ್ದು, 45 ಸಾವಿರ ಅಪ್ರಾಪ್ತ ಮಕ್ಕಳು ಗರ್ಭಿಣಿಯಾಗಿರೋದು ವರದಿಯಾಗಿದೆ. ಇದು ಭಯಾನಕ, ಆಘಾತಕಾರಿ ಅಂಕಿಅಂಶ ಎಂದು ಶ್ರೀರಾಮಸೇನಾ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಅಂಕಿ ಅಂಶಗಳ ಪೈಕಿ ಲವ್ ಜಿಹಾದ ಪ್ರಕರಣ ಸಂಖ್ಯೆಗಳೇ ಹೆಚ್ಚು. ನಮ್ಮ ಸಂಘಟನೆಗೆ ಪ್ರತಿನಿತ್ಯ ನಮ್ಮ ಮಕ್ಕಳನ್ನು ಕಿಡ್ನ್ಯಾಪ್ ಮಾಡಿದ್ದಾರೆಂದು ಪೋಷಕರಿಂದ ಕರೆ ಬರುತ್ತದೆ. ‌ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಇದಕ್ಕಾಗಿ ಪ್ರತ್ಯೇಕ ಮಹಿಳಾ ಪಡೆ ರಚನೆ ಮಾಡಬೇಕು.

ಧರ್ಮಸ್ಥಳದ ಸೌಜನ್ಯ ಕೂಡ ಕಾಣೆಯಾಗಿ ಶವವಾಗಿ ಪತ್ತೆಯಾಗಿದ್ದು, ಇದು ಬಹಳ ದೊಡ್ಡ ಪ್ರಕರಣ. ನಿರ್ಭಯಾ  ಪ್ರಕರಣದಂತೆ ಭೀಕರವಾಗಿದ್ದರೂ ಸೌಜನ್ಯ ಪ್ರಕರಣವನ್ನು ಮುಚ್ಚಿಹಾಕುವ ಕೆಲಸ ನಡೆಯುತ್ತಿದೆ. ಇದಕ್ಕೆ ಸರ್ಕಾರದ ನಿರ್ಲಕ್ಷ್ಯ, ಕಾನೂನಿನ ಸಡಿಲಿಕೆ ಕಾರಣ. ಬೆಳ್ತಂಗಡಿ ತಾಲೂಕು ಒಂದರಲ್ಲಿಯೇ ಸಾವಿನ ಅಂಕಿ ಅಂಶಗಳನ್ನು ಗಮನಿಸಿದಲ್ಲಿ ಭಯ ಆಗುತ್ತದೆ ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು