ಧಾರವಾಡ: ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗುವ ತಿರುಕನ ಕನಸು ಕಾಣುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವ್ಯಂಗ್ಯವಾಡಿದ್ದಾರೆ.
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯನವರಿಗೆ ಕನಸು ಕಾಣಲು ಅಧಿಕಾರವಿದೆ. ತಿರುಕನೋರ್ವ ಮನೆ ಮುಂದೆ ಕನಸು ಕಂಡ ಎಂಬ ಹಾಡಿದೆ, ಇದು ಕೂಡ ಹಾಗೆಯೇ ಆಗಿದೆ. ಹಾಗಂತ ನಾನು ಅವರನ್ನು ತಿರುಕರು ಅಂತಾ ಹೇಳುವುದಿಲ್ಲ ಎಂದು ಸ್ಪಷ್ಟನೆ ನೀಡಿದರು.
ರಾಜ್ಯದ ಜನತೆಗೆ ಕಾಂಗ್ರೆಸ್ ಪಕ್ಷದ ಮೇಲೆ ಭರವಸೆ ಇಲ್ಲ, ಆ ಪಕ್ಷ ಭೂತಕಾಲದ ಪಕ್ಷವಾಗುತ್ತಿದೆ ಎಂದು ಕೇಂದ್ರ ಸಚಿವರು ವ್ಯಂಗ್ಯವಾಡಿದ್ದಾರೆ.
ಕನಸು ಕಾಣಲು ತಿರುಕನಿಗೂ ಅಧಿಕಾರವಿದೆ. ಸಿದ್ದರಾಮಯ್ಯ ಬಹಳ ದೊಡ್ಡವರು. ಈ ಹಿಂದೆ ಅವರು ಮುಖ್ಯಮಂತ್ರಿ ಆಗಿದ್ದವರು. ಹೀಗಾಗಿ ಮುಂದೆ ಸರ್ಕಾರ ಬರುತ್ತದೆ ಅಂತಾ ಕನಸು ಕಾಣಲು ಅವರಿಗೆ ಅಧಿಕಾರವಿದೆ. ಅದನ್ನು ನನಸು ಮಾಡುವವರು ಮಾತ್ರ ಜನರು. ಆದರೆ ಜನರಿಗೆ ಕಾಂಗ್ರೆಸ್ ಪಕ್ಷದ ಮೇಲೆ ಭರವಸೆ ಇಲ್ಲ, ಆ ಪಕ್ಷವು ಭೂತಕಾಲದ ಪಕ್ಷ ಆಗುತ್ತಿದೆ ಎಂದರು.