ಹುಬ್ಬಳ್ಳಿ: ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮರಳಿ ಬಿಜೆಪಿಗೆ ಬಂದಿರುವುದು ಶೆಟ್ಟರ್ ಅಭಿಮಾನಿಗಳಲ್ಲಿ ಸಂಭ್ರಮ ಮನೆ ಮಾಡಿದೆ.
ಶೆಟ್ಟರ್ ಬಿಜೆಪಿ ಸೇರ್ಪಡೆ ಆಗುತ್ತಿದ್ದಂತೆಯೇ ಕೇಶ್ವಾಪೂರದ ಜಗದೀಶ್ ಶೆಟ್ಟರ್ ನಿವಾಸಕ್ಕೆ ಆಗಮಿಸಿದ ಬಿಜೆಪಿ ಕಾರ್ಯಕರ್ತರು ಹಾಗೂ ಶೆಟ್ಟರ್ ಅಭಿಮಾನಿಗಳು ಸಂಭ್ರಮಾಚರಣೆ ಮಾಡುವ ಮೂಲಕ ಶೆಟ್ಟರ್ ಬಿಜೆಪಿ ಸಂಭ್ರಮಾಚರಣೆ ಮಾಡಿದರು.
ಬಳಿಕ ಮಾಧ್ಯಮದ ಜೊತೆಗೆ ಮಾತನಾಡಿದ ಕಾರ್ಯಕರ್ತರು, ನಮಗೆ ಸಾಕಷ್ಟು ಖುಷಿಯನ್ನು ತಂದಿದೆ. ಶೆಟ್ಟರ್ ಜೊತೆಗೆ ಬಿಜೆಪಿ ತೊರೆದಿದ್ದ ನಾವೆಲ್ಲರೂ ಈಗ ಶೆಟ್ಟರ್ ನೇತೃತ್ವದಲ್ಲಿ ಬಿಜೆಪಿ ಸೇರ್ಪಡೆ ಆಗುತ್ತೇವೆ ಎಂದು ಶೆಟ್ಟರ್ ಬೆಂಬಲಿಗರು ಹರ್ಷೋದ್ಘಾರ ವ್ಯಕ್ತಪಡಿಸಿದರು.
ಇನ್ನೂ ಶೆಟ್ಟರ್ ಹಾಗೂ ಬಿಜೆಪಿಪರ ಘೋಷಣೆ ಕೂಗಿದ ಕಾರ್ಯಕರ್ತರು ಶ್ರೀರಾಮನ ಘೋಷಣೆ ಜೊತೆಗೆ ಸಂಭ್ರಮಿಸಿದರು. ಇಷ್ಟುದಿನ ಧ್ವನಿಗುಂದಿದ್ದ ಶ್ರೀರಾಮ್ ಘೋಷಣೆ ಈಗ ಮೊಳಗಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.