ಧಾರವಾಡ: ಇಲ್ಲಿಯ ಕೆಲಗೇರಿ ಗ್ರಾಮದಲ್ಲಿ ಧಾರವಾಡ ವಿಭಾಗಕ್ಕೆ “ಶೌರ್ಯ ಜಾಗರಣ ರಥ ಯಾತ್ರೆ” ಆಗಮಿಸಿದ್ದು. ಕೆಲಗೇರಿ ಗ್ರಾಮದ ಮಹಿಳೆಯರು ಪೂರ್ಣ ಕುಂಭದೊಂದಿಗೆ ಮತ್ತು ಗ್ರಾಮದ ರೈತರು ರಥವನ್ನು ಭವ್ಯವಾಗಿ ಸ್ವಾಗತಿಸಿದರು.
ಮುಖ್ಯ ವಕ್ತಾರರಾಗಿ ಆಗಮಿಸಿದ ಆರ್.ಎಸ್.ಎಸ್ ನ ಹಿರಿಯರಾದ ಶ್ರೀಧರ ನಾಡಿಗೇರ ಅವರು ಮಾತನಾಡಿ ಸನಾತನ ಧರ್ಮ ಅಮರ, ಭಾರತ ಜಗತ್ಗುರು ಆಗಬೇಕೆಂದ್ರೆ ಹಿಂದೂಗಳು ಜಾಗೃತವಾಗಬೇಕು, ಒಂದಾಗಬೇಕು ಎಂದು ಕರೆಕೊಟ್ಟರು.
ರಥದಲ್ಲಿ ಹನುಮನ ಮೂರ್ತಿ ಸ್ಥಾಪಿಸಲ್ಪಟ್ಟಿತು ರಥ ಯಾತ್ರೆಯು ದ್ವಿಚಕ್ರ ವಾಹನದ ಜಾಥಾದೂಂದಿಗೆ ನಗರದ ಪ್ರಮುಖ ಬಡಾವಣೆಗಳಲ್ಲಿ ಸಂಚರಿತು. ಈ ಸಂದರ್ಭದಲ್ಲಿ ಡಾ. ರಾಮನಗೌಡರ, ಶಿವಾನಂದ ಸತ್ತಿಗೇರಿ, ಶಶಿ ಹಿರೇಮಠ, ಈರೇಶ ಅಂಚಟಗೇರಿ, ವಿಜಯಾನಂದ ಶೆಟ್ಟಿ, ಬಸವರಾಜ ಗರಗ, ಪ್ರಮೋದ ಕಾರಕೂನ, ರುದ್ರಗೌಡರ್, ಚಂದ್ರಕಲಾ ಕೊಟಬಾಗಿ, ರೇಣುಕಾ ಇರಕಲ್, ಅಮಿತ್ ಪಾಟೀಲ ,ಹಾಗೂ ಗ್ರಾಮದ ಗುರು ಹಿರಿಯರು ಉಪಸ್ಥಿತರಿದ್ದರು.