News Karnataka Kannada
Thursday, May 09 2024
ಹುಬ್ಬಳ್ಳಿ-ಧಾರವಾಡ

ಪಿ.ಆರ್.ಓ, ಎಪಿಆರ್‍ಓಗಳು ನಿಷ್ಪಕ್ಷಪಾತವಾಗಿ ಕರ್ತವ್ಯ ನಿರ್ವಹಿಸಬೇಕು: ಡಿಸಿ ದಿವ್ಯ ಪ್ರಭು

ಧಾರವಾಡ ಲೋಕಸಭಾ ಮತಕ್ಷೇತ್ರದ ಸಾರ್ವತ್ರಿಕ ಚುನಾವಣೆಗಾಗಿ ಮತಗಟ್ಟೆಗಳಿಗೆ ನೇಮಕವಾಗಿರುವ ಮತಗಟ್ಟೆ ಅಧ್ಯಕ್ಷಾಧಿಕಾರಿ ಮತ್ತು ಸಹಾಯಕ ಮತಗಟ್ಟೆ ಅಧ್ಯಕ್ಷಾಧಿಕಾರಿಗಳು ನಿಷ್ಪಕ್ಷಪಾತವಾಗಿ ಮತ್ತು ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು.
Photo Credit : NewsKarnataka

ಧಾರವಾಡ : ಧಾರವಾಡ ಲೋಕಸಭಾ ಮತಕ್ಷೇತ್ರದ ಸಾರ್ವತ್ರಿಕ ಚುನಾವಣೆಗಾಗಿ ಮತಗಟ್ಟೆಗಳಿಗೆ ನೇಮಕವಾಗಿರುವ ಮತಗಟ್ಟೆ ಅಧ್ಯಕ್ಷಾಧಿಕಾರಿ ಮತ್ತು ಸಹಾಯಕ ಮತಗಟ್ಟೆ ಅಧ್ಯಕ್ಷಾಧಿಕಾರಿಗಳು ನಿಷ್ಪಕ್ಷಪಾತವಾಗಿ ಮತ್ತು ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು.

ಅವರು ನಗರದ ವಿದ್ಯಾಗಿರಿಯ ಜೆ.ಎಸ್.ಎಸ್ ಮಹಾವಿದ್ಯಾಲಯದ ಆವರಣದಲ್ಲಿ ಧಾರವಾಡ ಲೋಕಸಭಾ ಸಾರ್ವತ್ರಿಕ ಚುನಾವಣೆಯ ಮತಗಟ್ಟೆಗಳಿಗೆ ನೇಮಕವಾಗಿರುವ ಮತಗಟ್ಟೆ ಅಧ್ಯಕ್ಷಾಧಿಕಾರಿ ಮತ್ತು ಸಹಾಯಕ ಮತಗಟ್ಟೆ ಅಧ್ಯಕ್ಷಾಧಿಕಾರಿಗಳಿಗೆ ಆಯೋಜಿಸಿದ್ದ ಮೊದಲ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ, ಅವರನ್ನು ಉದ್ದೇಶಿಸಿ, ಮಾತನಾಡಿದರು.

ಮತದಾನ ನಡೆಯುವ ವೇಳೆ ಮತದಾರರಿಗೆ ಯಾವುದೇ ಅಡತಡೆಯಾಗದಂತೆ ಅಧಿಕಾರಿಗಳು ಕರ್ತವ್ಯ ನಿರ್ವಹಿಸುವಂತೆ ಪೂರ್ವಭಾವಿಯಾಗಿ ಎರಡು ಹಂತದ ತರಬೇತಿ ನೀಡಲಾಗುತ್ತಿದ್ದು, ಇದು ಮೊದಲ ಹಂತವಾಗಿದೆ. ಅಧಿಕಾರಿಗಳಿಗೆ ಮತಯಂತ್ರಗಳ ಮಾದರಿ, ಬಳಕೆ ಮಾಡುವ ವಿಧಾನ ಕುರಿತು ನುರಿತ ತಜ್ಞರು ತರಬೇತಿ ನೀಡುತ್ತಾರೆ ಎಂದರು.

ಇವ್ಹಿಎಂ, ವಿವಿ ಪ್ಯಾಟ್ ಮಷಿನ್‍ಗಳನ್ನು ಮಗುವಿನಂತೆ ಜೋಪಾನ: ಮತದಾನ ದಿನದಂದು ಬಳಕೆ ಮಾಡಲು ಪೂರೈಸುವ ಇವ್ಹಿಎಂ ಮತ್ತು ವಿವಿ ಪ್ಯಾಟ್ ಮಷಿನ್‍ಗಳನ್ನು ಜಾಗರೂಕತೆಯಿಂದ ನಿಭಾಯಿಸಬೇಕು. ತರಬೇತಿ ದಿನಗಳಂದು ನೀಡುವ ಪ್ರಾಯೋಗಿಕ ತರಬೇತಿಯಲ್ಲಿ ಮಷಿನ್‍ಗಳ ನಿರ್ವಹಣೆ ಕುರಿತು ಸರಿಯಾಗಿ ತಿಳಿದುಕೊಳ್ಳಬೇಕು.

ಮತದಾನ ದಿನದಂದು ಆಕಸ್ಮಿಕವಾಗಿ ತಾಂತ್ರಿಕ ತೊಂದರೆಗಳು ಉಂಟಾದಲ್ಲಿ ತಮ್ಮ ಸೆಕ್ಟರ್ ಅಧಿಕಾರಿಗೆ ಕರೆ ಮಾಡಿ, ತಕ್ಷಣ ತಿಳಿಸಬೇಕು ಮತ್ತು ಅವರ ನೆರವಿನಲ್ಲಿ ಸರಿಪಡಿಸಿಕೊಳ್ಳಬೇಕು. ಇವ್ಹಿಎಂ ಮತ್ತು ವಿವಿ ಪ್ಯಾಟ್ ಮಷಿನ್‍ಗಳು ಚುನಾವಣೆಯ ಮುಖ್ಯ ಭಾಗಗಳಾಗಿರುವದರಿಂದ ಮಗುವಿನಂತೆ ಜೋಪಾನ ಮಾಡಿಕೊಂಡು, ಸುಸ್ಥಿತಿಯಲ್ಲಿ ಇರುವಂತೆ ಬಳಕೆ ಮಾಡಿಕೊಳ್ಳಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು.

ಪಿಆರ್.ಓ, ಮತಗಟ್ಟೆ ತಂಡದ ನಾಯಕ: ಪ್ರತಿ ಮತಗಟ್ಟೆಯಲ್ಲಿ ಕರ್ತವ್ಯ ನಿರ್ವಹಿಸುವ ಮತಗಟ್ಟೆ ಅಧ್ಯಕ್ಷಾಧಿಕಾರಿ  ಆ ಮತಗಟ್ಟೆಯ ತಂಡದ ನಾಯಕ. ಮತಗಟ್ಟೆಯ ಎಲ್ಲ ಸಿಬ್ಬಂದಿ, ಮತಗಟ್ಟೆಯ ಬಗ್ಗೆ ಮಾಹಿತಿ ಗೊತ್ತಿರಬೇಕು. ಪಿಓ ಹ್ಯಾಂಡ್ ಬುಕ್ಕ್ ಸರಿಯಾಗಿ ಓದಿ, ತಮ್ಮಕರ್ತವ್ಯ, ಜವಾಬ್ದರಿ ಮತ್ತು ಇತರ ಕೆಲಸಗಳ ಬಗ್ಗೆ ತಿಳಿದಿರಬೇಕು. ಅಂದಾಗ ಸೂಸುತ್ರವಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದರು.

ಮತದಾನಕ್ಕೆ ಮತದಾರ ಪಟ್ಟಿಯೇ ಮೂಲ ಆಧಾರ: ಯಾವುದೇ ಅರ್ಹ ಮತದಾರ ಮತದಾನ ಮಾಡಲು ಬಂದಲ್ಲಿ ಆ ಮತಗಟ್ಟೆಯ ಮತದಾರ ಪಟ್ಟಿಯಲ್ಲಿ ಅವನ ಹೆಸರು ಇರುವುದು ಕಡ್ಡಾಯ. ಮತದಾನ ದಿನದಂದು ಪ್ರಸ್ತುತ ಮತ್ತು ಚಾಲ್ತಿಯಲ್ಲಿರುವ ಮತದಾರ ಪಟ್ಟಿಯಲ್ಲಿ ಮತದಾನಕ್ಕೆ ಬರುವ ವ್ಯಕ್ತಿಯ ಹೆಸರು ಇರಬೇಕು.

ಡಿಮಾಸ್ಟ್ರಿಂಗ್ ಸುಲಭಗೊಳಿಸಲು ಕ್ರಮ: ಪಿಆರ್.ಓ ಗಳಿಗೆ ಮಾಸ್ಟ್ರಿಂಗ್ ಮತ್ತು ಡಿಮಾಸ್ಟ್ರಿಂಗ್ ಸುಲಭವಾಗಿ ಮಾಡಿಕೊಡಲು ಅಗತ್ಯ, ನುರಿತ ಸಿಬ್ಬಂದಿಗಳನ್ನು ನೇಮಿಸಲಾಗುವುದು. ಡಿಮಾಸ್ಟ್ರಿಂಗ್ ವ್ಯವಸ್ಥಿವಾಗಿ ನಿರ್ವಹಿಸಲು ಸೆಕ್ಟರ್ ಆಫೀಸರ್‍ಗಳಿಗೆ ಅಗತ್ಯ ಮಾರ್ಗದರ್ಶನ ಮತ್ತು ನುರಿತ ಸಿಬ್ಬಂದಿಗಳನ್ನು ನೇಮಿಸಲಾಗುತ್ತದೆ. ಎಲ್ಲರೂ ಸಹಕರಿಸಿ, ಚುನಾವಣೆ ಯಶಸ್ವಿಗೊಳಿಸಲು ಕೈ ಜೋಡಿಸಿ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಸಹಾಯಕ ಚುನಾವಣಾಧಿಕಾರಿಗಳಾದ ಪ್ರಿಯಾಂಗಾ ಎಂ., ಶಾಲಂ ಹುಸೇನ್, ನೋಡಲ್ ಅಧಿಕಾರಿ ಅಜೀಜ್ ದೇಸಾಯಿ, ತಹಶಿಲ್ದಾರ ಡಾ.ಡಿ.ಎಚ್.ಹೂಗಾರ, ಮಹಾನಗರ ಪಾಲಿಕೆ ವಲಯ ಅಧಿಕಾರಿ ಶಂಕರಗೌಡ ಪಾಟೀಲ, ಚುನಾವಣಾ ವಿಭಾಗದ ಅಧಿಕಾರಿ ಉಮೇಶ ಸವಣೂರ, ಕಂದಾಯ ನಿರೀಕ್ಷಕ ಗುರು ಸುಣಗಾರ, ಸಂಪತ್ತಕುಮಾರ ವಡೆಯರ ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು