ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡದಲ್ಲಿ ಅಭಿವೃದ್ಧಿಗೆ ಸಾಕಷ್ಟು ಅವಕಾಶ ಇದೆ. ಇದು ವಿಶೇಷ ಹಬ್ ರೂಪದಲ್ಲಿ ಸಿದ್ಧಾರೂಢ ಸ್ವಾಮೀಜಿ ಹೆಸರಿನಲ್ಲಿ ರೈಲು ನಿಲ್ದಾಣ ಇದೆ. ಸಾಹಿತ್ಯ, ಸಂಗೀತ ಅನೇಕ ಸಾಧಕರ ನೆಲೆಸಿದ ಸ್ಥಾನವಿದು. ಸ್ಮಾರ್ಟ್ ಸಿಟಿ ಅಡಿಯಲ್ಲಿ ಅಭಿವೃದ್ಧಿ ಕೂಡ ಆಗುತ್ತಿದೆ ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ಹೇಳಿದರು.
ನಗರದಲ್ಲಿ ಬಿಜೆಪಿ ಪ್ರಣಾಳಿಕೆ ಸಭೆಯಲ್ಲಿ ಮಾತನಾಡಿದ ಅವರು, ಈ ಸಭೆಯಲ್ಲಿ ನಿಮ್ಮೆಲ್ಲರ ಸಲಹೆ ಪಡೆದು ಉತ್ತಮ ಪ್ರಣಾಳಿಕೆ ರಚಿಸಲಾಗುವುದು. ಡಬಲ್ ಇಂಜಿನ್ ಸರ್ಕಾರದಿಂದ ಅಭಿವೃದ್ಧಿ ಕ್ಷಿಪ್ರಗತಿಯಲ್ಲಿ ನಡೆಯುತ್ತಿದೆ. ಟೆಕ್ನಾಲಜಿಯನ್ನು ಕೇಂದ್ರ ಸರ್ಕಾರ ಬಳಸಿಕೊಂಡು ಮುನ್ನಡೆಯುತ್ತಿದೆ. ಈಗಾಗಲೇ ಎಲ್ಲ ಕ್ಷೇತ್ರದಲ್ಲಿ ಬದಲಾವಣೆ ತರಲಾಗುತ್ತಿದೆ. ಈ ಬಾರಿ ಪೂರ್ಣ ಬಹುಮತದ ಸರ್ಕಾರ ತರಬೇಕು ಎಂದರು.
ಮೋದಿ ಅಸಹಾಯಕ ಪ್ರಧಾನಿಯಲ್ಲ, ದೇಶದ 45 ಕೋಟಿ ಮಂದಿ ಜನಧನ್ ಖಾತೆ ಹೊಂದಿದ್ದಾರೆ. ಯುಪಿಐ ಮೂಲಕ ಹಣಕಾಸು ವಹಿವಾಟು ನಡೆಯುತ್ತಿದೆ. 80 ಕೋಟಿ ಜನರು ಸ್ಮಾರ್ಟ್ ಫೋನ್ ಹೊಂದಿದ್ದಾರೆ. ರಸ್ತೆ, ನೀರು, ಬಯೋಮೆಟ್ರಿಕ್ ಗುರುತು ಇಂದು ಪಡಿತರ ಚೀಟಿಯಾಗುತ್ತಿದೆ. ದೇಶದಲ್ಲಿ ಎಲ್ಲಿ ಬೇಕಾದರೂ ಪಡಿತರ ಪಡೆಯಬಹುದು. ಕರ್ನಾಟಕವು ದೇಶದ ಸಿಲಿಕಾನ್ ವ್ಯಾಲಿಯಾಗಿದೆ ಎಂದರು.