ಹುಬ್ಬಳ್ಳಿ : ನಾನು ಭಾರತೀಯ ಜನತಾ ಪಾರ್ಟಿಯಲ್ಲಿಯೇ ಇರುತ್ತೇನೆ. ಪಕ್ಷ ಬೇರೆ, ವೈಯಕ್ತಿಕ ಸಂಭಂದ ಬೇರೆ. ನಾನು ದಿನಾ ಈ ಮನೆಗೆ ಬರ್ತೀನಿ, ಊಟ ಮಾಡಿ ಹೋಗ್ತೀನಿ ಎಂದು ಶೆಟ್ಟರ್ ಸಹೋದರ ಎಂ ಎಲ್ ಸಿ ಪ್ರದೀಪ್ ಶೆಟ್ಟರ್ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವರಿನ್ನು ಭಾರತೀಯ ಜನತಾ ಪಕ್ಷದಲ್ಲಿ ಇದ್ದಾರೆ. ಅವರಿನ್ನು ಪಕ್ಷದ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿಲ್ಲ. ಇನ್ನು 20 ರ ವರೆಗೂ ಸಮಯ ಇದೆ. ಅವರಿನ್ನು ಯಾವದೇ ತೀರ್ಮಾನ ಮಾಡಿಲ್ಲ. ನಮ್ಮ ನಿಲುವು ನಾನು ಬಿಜೆಪಿಯಲ್ಲಿ ಇರ್ತೀನಿ. ಕಾಂಗ್ರೆಸ್ ನವರು, ಜೆಡಿಎಸ್ ನವರು ಅಹ್ವಾನ ಕೊಟ್ಟಿದ್ದಾರೆ. ಅದು ಜಗದೀಶ್ ಶೆಟ್ಟರ್ ಗೆ ಬಿಟ್ಟ ನಿರ್ಧಾರ. ಶೆಟ್ಟರ್ ಜೊತೆ ಇನ್ನು ಯಾರೂ ಮಾತಾಡಿಲ್ಲ ಎಂದರು.