News Karnataka Kannada
Sunday, May 12 2024
ಹುಬ್ಬಳ್ಳಿ-ಧಾರವಾಡ

ಬೆಂಗಳೂರಿನಲ್ಲಿ ನನ್ನ ಅಂತಿಮ ತೀರ್ಮಾನ : ಜಗದೀಶ್ ಶೆಟ್ಟರ್

I don't know why shettar didn't have a ticket: Jagadish Shettar
Photo Credit : News Kannada

ಹುಬ್ಬಳ್ಳಿ : ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೇನೆ. ಇನ್ನು ಕೆಲವರ ಜೊತೆ ಮಾತುಕತೆ ನಡೀತಿದೆ. ಬೆಂಗಳೂರಿಗೆ ಹೋಗಿ ನಾನು ಕೆಲವರ ಜೊತೆ ಚರ್ಚೆ ಮಾಡಬೇಕಿದೆ. ಬೆಂಗಳೂರಿನಲ್ಲಿ ನನ್ನ ಅಂತಿಮ ತೀರ್ಮಾನ ಎಂದ ಮಾಜಿ‌ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದರು.

ನಗರದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನಿನ್ನು ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಕೊಟ್ಟಿಲ್ಲ. ನಾನು ಬಿಜೆಪಿ ಶಾಸಕರಾಗಿ ಪಕ್ಷೇತರರಾಗಿ ಸ್ಪರ್ಧೆ ಮಾಡಿದ್ರೆ ಕಷ್ಟ ಆಗತಿತ್ತು..ಹೀಗಾಗಿ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೇನೆ. ಸಂಘದ ಕೆಲ ಹಿರಿಯರು ನನ್ನ ಜೊತೆ ಮಾತಾಡಿದ್ದರೆ.ಹೆಲಿಕ್ಯಾಪ್ಟರ್ ಇರೋದು ನಮ್ಮ ಹಿರಿಯರದ್ದು.ಶ್ಯಾಮನೂರ ಗಣೇಶ ಅವರ ಹೆಲಿಕ್ಯಾಪ್ಟರ್ ಕಳಸಿದ್ದಾರೆ. ನಾನು ಹೋಗ್ತೀದಿನಿ ಎಂದರು.

ಇದು ಒಂದು ಸಣ್ಣ ವಿಷಯ,ನಾನು ಟಿಕೆಟ್ ಕೊಡಿ ಎಂದಿದ್ದೇನೆ..ನೋಡೋಣ ಅದು ಬಂದರೆ ಬರಲಿ. ನನಗೆ ಎಲ್ಲ ಸ್ಥಾನ ಮಾನ ಕೊಟ್ಟಿದ್ದಾರೆ.ನಾನು ಒಪ್ಕೋತಿನಿ. ಎರಡು ಬಾರಿ ನನಗೆ ಅವಕಾಶ ಸಿಕ್ಕಾಗಲೂ ಪ್ರಮಾಣಿಕ ಕೆಲಸ ಮಾಡಿದ್ದೇನೆ.ಯಾಕೆ ನನಗೆ ಅವಕಾಶ ಕೊಟ್ರು,ಅನ್ನೋದನ್ನ ನಾನು ಡಿಟೇಲ್ ಮಾತಾಡ್ತೀನಿ. ಪಕ್ಷ ನನಗೆ ಎಲ್ಲ ಅವಕಾಶ ಕೊಟ್ಟಿದೆ,ಅದಕ್ಕೆ ಅಭಿನಂದನೆ.ಇದಕ್ಕೆ ಪ್ರತಿಯಾಗಿ ನಾನು ಪಕ್ಷ ಕಟ್ಟಿದ್ದೇನೆ ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು