ಹುಬ್ಬಳ್ಳಿ : ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೇನೆ. ಇನ್ನು ಕೆಲವರ ಜೊತೆ ಮಾತುಕತೆ ನಡೀತಿದೆ. ಬೆಂಗಳೂರಿಗೆ ಹೋಗಿ ನಾನು ಕೆಲವರ ಜೊತೆ ಚರ್ಚೆ ಮಾಡಬೇಕಿದೆ. ಬೆಂಗಳೂರಿನಲ್ಲಿ ನನ್ನ ಅಂತಿಮ ತೀರ್ಮಾನ ಎಂದ ಮಾಜಿಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದರು.
ನಗರದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನಿನ್ನು ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಕೊಟ್ಟಿಲ್ಲ. ನಾನು ಬಿಜೆಪಿ ಶಾಸಕರಾಗಿ ಪಕ್ಷೇತರರಾಗಿ ಸ್ಪರ್ಧೆ ಮಾಡಿದ್ರೆ ಕಷ್ಟ ಆಗತಿತ್ತು..ಹೀಗಾಗಿ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೇನೆ. ಸಂಘದ ಕೆಲ ಹಿರಿಯರು ನನ್ನ ಜೊತೆ ಮಾತಾಡಿದ್ದರೆ.ಹೆಲಿಕ್ಯಾಪ್ಟರ್ ಇರೋದು ನಮ್ಮ ಹಿರಿಯರದ್ದು.ಶ್ಯಾಮನೂರ ಗಣೇಶ ಅವರ ಹೆಲಿಕ್ಯಾಪ್ಟರ್ ಕಳಸಿದ್ದಾರೆ. ನಾನು ಹೋಗ್ತೀದಿನಿ ಎಂದರು.
ಇದು ಒಂದು ಸಣ್ಣ ವಿಷಯ,ನಾನು ಟಿಕೆಟ್ ಕೊಡಿ ಎಂದಿದ್ದೇನೆ..ನೋಡೋಣ ಅದು ಬಂದರೆ ಬರಲಿ. ನನಗೆ ಎಲ್ಲ ಸ್ಥಾನ ಮಾನ ಕೊಟ್ಟಿದ್ದಾರೆ.ನಾನು ಒಪ್ಕೋತಿನಿ. ಎರಡು ಬಾರಿ ನನಗೆ ಅವಕಾಶ ಸಿಕ್ಕಾಗಲೂ ಪ್ರಮಾಣಿಕ ಕೆಲಸ ಮಾಡಿದ್ದೇನೆ.ಯಾಕೆ ನನಗೆ ಅವಕಾಶ ಕೊಟ್ರು,ಅನ್ನೋದನ್ನ ನಾನು ಡಿಟೇಲ್ ಮಾತಾಡ್ತೀನಿ. ಪಕ್ಷ ನನಗೆ ಎಲ್ಲ ಅವಕಾಶ ಕೊಟ್ಟಿದೆ,ಅದಕ್ಕೆ ಅಭಿನಂದನೆ.ಇದಕ್ಕೆ ಪ್ರತಿಯಾಗಿ ನಾನು ಪಕ್ಷ ಕಟ್ಟಿದ್ದೇನೆ ಎಂದರು.