ಹುಬ್ಬಳ್ಳಿ: ಕೋವಿಡ್ ಹಗರಣದ ತನಿಖೆ ಕಾಟಾಚಾರಕ್ಕೆ ಮಾಡ್ತಿಲ್ಲ ತಪ್ಪಿತಸ್ತರಿಗೆ ಶಿಕ್ಷೆಯಾಗಲೆಂದೇ ನ್ಯಾಯಾಂಗ ತನಿಖೆ ಮಾಡ್ತಿದ್ದೇವೆ.ರಾಜ್ಯಾದ್ಯಂತ ಪ್ರವಾಸ ಕೈಗೊಂಡಿದ್ದೇನೆ. ನಮ್ಮ ಇಲಾಖೆಯಿಂದಲೂ ಕೆಲವೊಂದು ಹಗರಣಗಳ ತನಿಖೆ ನಡೀತಿದೆ.ಬಿಜೆಪಿ ಸರ್ಕಾರದಲ್ಲಿ ಭಾರಿ ಭ್ರಷ್ಟಾಚಾರ ನಡೆದಿದೆ ಅಂತ ಜನ ನಮ್ಮನ್ನು ಅಧಿಕಾರಕ್ಕೆ ತಂದಿದ್ದಾರೆ ಎಂದು ಸಚಿವ ಡಾ.ಶರಣಪ್ರಕಾಶ ಪಾಟೀಲ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಸರ್ಕಾರದಲ್ಲಿ ಪಾರದರ್ಶಕ ಆಡಳಿತ ಕೊಡ್ತೇವೆ ಅಂತ ವಾಗ್ದಾನ ಮಾಡಿದ್ದೇವೆ.ಅದರ ಪ್ರಕಾರ ನಾವು ನಡೆದುಕೊಳ್ತೇವೆ.ಜನರಿಗೆ ನೀಡಿದ ಭರವಸೆಯಂತೆ ಮೂರು ಗ್ಯಾರಂಟಿ ಜಾರಿಗೆ ಆಗಿದೆ.ಇನ್ನೊಂದು ಈ ತಿಂಗಳು, ಯುವ ನಿಧಿ ಡಿಸೆಂಬರ್ ನಲ್ಲಿ ಆರಂಭ ಆಗುತ್ತೆ.ದ್ವೇಷದಿಂದ ನಾವು ಬಿಜೆಪಿ ಸರ್ಕಾರದ ಹಗರಣ ಮಾಡ್ತಿಲ್ಲ.ಇನ್ನೂ ತನಿಖೆಯೇ ಆರಂಭಗೊಂಡಿಲ್ಲ.ಆಗಲೇ ದ್ವೇಷದ ರಾಜಕಾರಣ ಅಂದ್ರೆ ಹೇಗೆ.ನಮಗೇ ಟಾರ್ಗೆಟ್ ಮಾಡ್ತಿದಾರೆ ಅಂತ ಅವರೇಕೆ ಅಂದುಕೊಳ್ತಾರೆ.ತನಿಖೆಯಿಂದ ಸತ್ಯಾಸತ್ಯತೆ ಹೊರಬರಲಿದೆ..ಹಗರಣಗಳ ತನಿಖೆ ಮಾಡುವಂತೆ ಆಗ್ರಹಿಸಿದೆವು.ಆದ್ರೆ ಅದನ್ನು ಬಿಜೆಪಿ ಕಿವಿಗೆ ಹಾಕಿಕೊಳ್ಳಲಿಲ್ಲ.
40 ಪರ್ಸೆಂಟೇಜ್ ಭ್ರಷ್ಟಾಚಾರ ಆಗಿದೆ ಅನ್ನೋದು ಜಗಜ್ಜಾಹೀರಾಗಿದೆ.ಅದರ ಬಗ್ಗೆ ತನಿಖೆ ಮಾಡ್ತಿದ್ದೇವೆ.ಪಾರದರ್ಶಕ ಆಡಳಿತ ಕೊಡಬೇಕೆಂಬ ಉದ್ದೇಶವಿದೆ.ಆದ್ರೆ ಯಾರನ್ನಾದ್ರೂ ಟಾರ್ಗೆಟ್ ಮಾಡಬೇಕೆಂಬ ದುರುದ್ದೇಶವಿಲ್ಲಎಂದರು.
ಕಿಮ್ಸ್ ಸಿಬ್ಬಂದಿ ಖಾಸಗಿ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಣ ವಿವಾರಕ್ಕೆ ಪ್ರತಿಕ್ರಿಯಿಸಿ, ದಾಖಲೆಗಳಿದ್ದರೆ ಕೊಡಿ, ಸೂಕ್ತ ಕ್ರಮ ಕೈಗೊಳ್ತೇವೆ.ಕರ್ತವ್ಯದ ಸಮಯದಲ್ಲಿ ಸಿಬ್ಬಂದಿ ಕಿಮ್ಸ್ ನಲ್ಲಿಯೇ ಇರಬೇಕಾಗುತ್ತೆ.ಕೋವಿಡ್ ಹಗರಣದ ನಿಷ್ಪಕ್ಷಪಾತ ತನಿಖೆ ಮಾಡ್ತೇವೆ.ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ಮಾಡಿಸ್ತಿದ್ದೇವೆ ಎಂದರು.