ಕುಂದಗೋಳ: ಕುಂದಗೋಳ ವಿಧಾನಸಭಾ ಮತಕ್ಷೇತ್ರದಲ್ಲಿ ಗೆಲುವಿನ ಪಣ ತೊಟ್ಟಿರುವ ಎಂ.ಆರ್.ಪಾಟೀಲ್ ಕಂಪ್ಲಿಕೊಪ್ಪ, ವರೂರ, ಪಾಲಿಕೊಪ್ಪ, ತಿರುಮಲಕೊಪ್ಪ, ಅಗಡಿ, ಅರಳಿಕಟ್ಟಿ ಗ್ರಾಮಗಳಲ್ಲಿ ಚುನಾವಣಾ ಪ್ರಚಾರದ ರಣಕಹಳೆ ಭರ್ಜರಿಯಾಗಿ ನಡೆಸಿದರು.
ಪ್ರತಿ ಗ್ರಾಮಸ್ಥರು ಬಿಜೆಪಿ ಅಭ್ಯರ್ಥಿ ಎಮ್.ಆರ್.ಪಾಟೀಲ್ ಅವರಿಗೆ ಆರತಿ, ಮಾಲಾರ್ಪಣೆ ಮಾಡಿ, ಹೃತ್ತೂರ್ವಕವಾಗಿ ಸ್ವಾಗತಿಸಿದರು. ಸುಡು ಬಿಸಿಲಿನಲ್ಲಿ ಗ್ರಾಮಗಳ ಪ್ರತಿ ಬೀದಿಗಳಲ್ಲಿ ಸಂಚರಿಸಿ ಪ್ರಚಾರ ನಡೆಸಿದ ಎಮ್.ಆರ್.ಪಾಟೀಲ್, ಮನೆ, ಮನೆಗಳಿಗೆ ತೆರಳಿ ಕರಪತ್ರ ನೀಡಿ ಪ್ರಚಾರ ನಡೆಸಿದರು. ಈ ವೇಳೆಯಲ್ಲಿ ಗ್ರಾಮಸ್ಥರು ಬಿಜೆಪಿ ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನು ಶ್ಲಾಘಿಸಿದರು.
ಕುಂದಗೋಳ ಪಟ್ಟಣದಲ್ಲಿ ಕ್ಷೇತ್ರದ ಕುರುಬ ಸಮಾಜದ ವತಿಯಿಂದ ಸಂಪ್ರದಾಯ ಬದ್ಧವಾಗಿ ಕಂಬಳಿ ಹೋದಿಸಿ ಕುರಿಮರಿ ನೀಡಿ ಸನ್ಮಾನಿಸಲಾಯಿತು. ಇದೇ ವೇಳೆ ಸಮುದಾಯದ ಪ್ರಮುಖರು ಹಾಗೂ ಇತರರು ಕಾಂಗ್ರೆಸ್ ಪಕ್ಷ ತೊರೆದು ಎಮ್.ಆರ್.ಪಾಟೀಲ್ ಅವರ ನೇತೃತ್ವದಲ್ಲಿ ಬಿಜೆಪಿ ಸೇರ್ಪಡೆಗೊಂಡು ಮತ ನೀಡುವ ವಿಶ್ವಾಸ ವ್ಯಕ್ತಪಡಿಸಿದರು.