ಹುಬ್ಬಳ್ಳಿ: ನನ್ನ ದೆಹಲಿ ಭೇಟಿಗೆ ವಿಶೇಷ ಅರ್ಥವಿಲ್ಲ. ನನ್ನ ಮತ್ತು ಜೋಶಿ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಒಂದು ವಾರದಲ್ಲಿ ಎಲ್ಲ ಸಮಸ್ಯೆಗಳಿಗೆ ತೆರೆ ಬೀಳಲಿದೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸಮಂಜಸಿ ಮಾಡಿಕೊಂಡಿದ್ದಾರೆ.
ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಬಿಜೆಪಿ ರಾಷ್ಟ್ರೀಯ ಸಮಾವೇಶದಲ್ಲಿ ಭಾಗಿಯಾಗಲು ಹೋಗಿದ್ದೆ. ನನ್ನ ಆಪ್ತರನ್ನು ಬಿಜೆಪಿಗೆ ವಾಪಸ್ ಕರೆದುಕೊಳ್ಳಲು ವಿರೋಧ ಮಾಡುವ ಕುರಿತು ಚರ್ಚಿಸಿಲ್ಲ.ಇಂತಹ ವಿಷಯಗಳನ್ನು ದೆಹಲಿವರೆಗೂ ತೆಗೆದುಕೊಂಡು ಹೋಗಲ್ಲ. ನನ್ನ ಆಪ್ತರ ಸಮಸ್ಯೆ ಶೀಘ್ರವೇ ಬಗೆಹರಿಯುತ್ತೆ.ವೈಯಕ್ತಿಕ ಕಾರಣಗಳಿಂದ ಬಿಜೆಪಿ ಸಭೆಗಳಲ್ಲಿ ನಾನು ಭಾಗಿಯಾಗಿಲ್ಲ.ಮುಂದಿನ ದಿನಗಳಲ್ಲಿ ಭಾಗಿಯಾಗುತ್ತೇನೆ. ನಾನು ಮತ್ತು ಜೋಶಿ ಒಂದೇ ಪಕ್ಷದಲ್ಲಿ ಇದ್ದೇವೆ ಅಂದ್ಮೇಲೆ ಭಿನ್ನಾಭಿಪ್ರಾಯ ಬಿಡಬೇಕಾಗುತ್ತೆ. ಎಲ್ಲ ಗೊಂದಲಗಳಿಗೆ ಶೀಘ್ರವೇ ತೆರೆ ಬೀಳಲಿದೆ ಎಂದರು.