ಹುಬ್ಬಳ್ಳಿ: ನಾನು ಸಿದ್ಧರಾಮಯ್ಯನವರ ವಕ್ತಾರನಲ್ಲ ಎಂದು ಹುಬ್ಬಳ್ಳಿಯಲ್ಲಿ ಬಿ.ಕೆ ಹರಿಪ್ರಸಾದ್, ಪರೋಕ್ಷವಾಗಿ ಸಿಎಂ ಸಿದ್ದರಾಮಯ್ಯ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ನಗರದಲ್ಲಿಂದು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ಮುಸ್ಲಿಂ ಸಮುದಾಯ ಹೇಳಿಕೆಯ ಬಗ್ಗೆ ಮಾತನಾಡಲು ನಾನು ಸಿಎಂ ಸಿದ್ಧರಾಮಯ್ಯನವರ ವಕ್ತಾರನಲ್ಲ. ಸಿದ್ದರಾಮಯ್ಯ ಅವರಿಗೆ ಬಹಳ ಅನುಭವ ಇದೆ. ಅವರಿಗೆ ಬಹಳ ಮಾಹಿತಿ ಇರುತ್ತದೆ, ಅದಕ್ಕೆ ಅವರನ್ನು ಕೇಳೋದ ಒಳ್ಳೆಯದು ಎಂದರು.
ನಾನೆಲ್ಲಿ ಸಿದ್ದರಾಮಯ್ಯ ವಿರುದ್ದ ಮಾತಾಡ್ತಿಲ್ಲ. ನಮ್ಮ ಸಮುದಾಯಕ್ಕೆ ಇವಾಗಿಂದ ಅಲ್ಲ,ಮುಂಚೆ ಇಂದ ಅನ್ಯಾಯ ಆಗಿದೆ. ಪಕ್ಷದಲ್ಲಿ ಎಲ್ಲ ಚೆನ್ನಾಗಿದೆ,ನಾನು ಚೆನ್ನಾಗಿದೀನಿ ಎಂದ ಹರಿಪ್ರಸಾದ್ ಹೇಳಿದರು