ಹುಬ್ಬಳ್ಳಿ: ಇದೇ ಏಪ್ರಿಲ್ 19 ರಂದು ನಾಮಪತ್ರ ಸಲ್ಲಿಕೆ ಮಾಡಲಾಗುವುದು. ರಾಷ್ಟೀಯ ಅಧ್ಯಕ್ವರಾದ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದೆನೆ. ಈ ಸೇರ್ಪಡೆಗೆ ಕಾರಣ ಹಲವಾರು ವಿಚಾರಗಳನ್ನು ನಾನು ಹೇಳಿದ್ದೆನೆ. ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ನಾನು ಸ್ಪರ್ಧೆಯನ್ನು ನಾನು ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 30 ವರ್ಷದಿಂದ ಬಿಜೆಪಿ ಕಟ್ಟಿ ಬೆಳಸಿದ್ದಂತ ವ್ಯಕ್ತಿಗೆ ಹ್ಯುಮಿಲೇಷನ್ ಆಯ್ತು ಆ ಪರಿಸ್ಥಿತಿಯಿಂದ ಬಿಜೆಪಿಗೆ ರಾಜೀನಾಮೆ ಕೊಡಬೇಕಾಯಿತು. ಅಧಿಕಾರಕ್ಕಾಗಿ ನಾನು ಪಕ್ಷವನ್ನು ಬದಲಾವಣೆ ಮಾಡಿಲ್ಲಾ. 2 ವರ್ಷ ಹಿಂದೆ ಬೊಮ್ಮಾಯಿ ಮುಖ್ಯಮಂತ್ರಿ ಸ್ಥಾನದಲ್ಲಿ ಕ್ಯಾಬಿನೆಟ್ ನಲ್ಲಿ ಮಂತ್ರಿಸ್ಥಾನ ವನ್ನು ನಾನೇ ಸ್ವತಃ ಬಿಟ್ಟುಕೊಟ್ಟೆ.
ಅಧಿಕಾರಕ್ಕೆ ಅಂಟಿಕೊಂಡಿದ್ದರೆ ಬಹುಶಃ ಅವರ ಬೆನ್ನತ್ತಿ ಮಂತ್ರಿ ಆಗಬಹುದಿತ್ತು. 6 ಬಾರಿ ಸತತವಾಗಿ ಆಯ್ಕೆಯಾದ ವ್ಯಕ್ತಿ ನಾನು ಹೈಕಮಾಂಡಗೆ ಹೇಳಿದ್ದು, 7 ನೇ ಬಾರಿ ಸ್ಪರ್ಧೆ ಮಾಡತ್ತಾ ಇದ್ದೇನೆ ಕೇವಲ ಶಾಸಕನಾಗಿ ಕೆಲಸಮಾಡಿ ಅಧಿಕಾರ ಅವದಿಯ ನಂತರ , ನೀವು ಹೇಳಿದ ಹಾಗೇ ನಾನು ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ ಎಂದು ಹೇಳಿದ್ದೆ. ಆದ್ರೆ ಅದಕ್ಕೆ ಯಾವುದೇ ರೀತಿ ಬೆಲೆ ನೀಡಿಲ್ಲ . ಕಾಂಗ್ರೆಸ್ ಪಾರ್ಟಿ ಸೇರಿದ ನಂತರ ಬಿಜೆಪಿ ಪಕ್ಷವನ್ನು ಟೀಕೆ ಮಾಡಬೇಕು ಅಂತ ಇಲ್ಲಾ. ಬಿಜೆಪಿ ಲೀಡರ್ ಷಿಪ್ ಕೊಟ್ಟಿದೆ ಸ್ಥಾನ ಮಾನ ಕೊಟ್ಟಿದೆ. ಪಕ್ಷವನ್ನು ನಾನು ಬೈಯುವುದಿಲ್ಲಾ ಕೆಲವೊಂದು ವ್ಯಕ್ತಿಗಳು ಇದ್ದಾರೆ ಎಂದರು.