ಹುಬ್ಬಳ್ಳಿ: ಬಡವರ ಪಾಲಿನ ಸಂಜೀವಿನಿ ಎಂದು ಕರೆಸಿಕೊಳ್ಳುವ ಕಿಮ್ಸ್ ಆಸ್ಪತ್ರೆಯಂತೆಯೇ, ಚಿಟಗುಪ್ಪಿ ಆಸ್ಪತ್ರೆಯ ವೈದ್ಯರು ಕ್ಲಿಷ್ಟಕರ ಶಸ್ತ್ರಚಿಕಿತ್ಸೆ ನಡೆಸಿ ಮೂವರು ಮಹಿಳೆಯರಿಗೆ ಮರುಜೀವ ನೀಡಿದ್ದಾರೆ. ಅದೇನು ಅಂತೀರಾ ಈ ಸ್ಟೋರಿ ನೋಡಿ
ಹೌದು, ಹುಬ್ಬಳ್ಳಿ ಜನತೆಗೆ ಹಾಗೂ ಅಕ್ಕಪಕ್ಕದ ಊರಿನ ಜನರಿಗೆ ಚಿಟಗುಪ್ಪಿ ಆಸ್ಪತ್ರೆಯು ಉತ್ತಮ ಸೇವೆಯನ್ನು ನೀಡುತ್ತಾ ಬಂದಿದೆ. ಇಲ್ಲಿ ಮಹಿಳೆಯರಿಗೆ ಸುರಕ್ಷಿತ ಹೆರಿಗೆ ಹಾಗೂ ಸಂತಾನಹರಣ ಶಸ್ತ್ರ ಚಿಕಿತ್ಸೆ ಸೇರಿ ವಿವಿಧ ರೀತಿಯ ಚಿಕಿತ್ಸೆ ನೀಡಲಾಗುತ್ತಿದೆ. ಇದೀಗ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಶ್ರೀಧರ ದಂಡೆಪ್ಪನವರ ನೇತೃತ್ವದಲ್ಲಿ ಮೂವರು ಮಹಿಳೆಯರಿಗೆ ಯಶಸ್ವಿ ಶಸ್ತ್ರ ಚಿಕಿತ್ಸೆನಡೆಸಿದ್ದಾರೆ ಮಾಡಿ ಜೀವ ಉಳಿಸಿದ್ದಾರೆ.
ಹುಬ್ಬಳ್ಳಿಯ 46 ವರ್ಷದ ಫಕ್ಕಿರವ್ವ ನಾಗಸಮುದ್ರ ಎಂಬ ಕಾರ್ಮಿಕ ಮಹಿಳೆಯೊಬ್ಬಳು ರಕ್ತದ ಹೀನತೆಯಿಂದ ಬಳಲುತ್ತಿದ್ದಳು, ಮಹಿಳೆಯ ಹೊಟ್ಟೆಯಲ್ಲಿ ಸರಿಸುಮಾರು 2.4 ಕೆಜಿ ಯಷ್ಟು ಫ್ರೈಬ್ರಾಯ್ಡ್ ಗಡ್ಡೆ ಇರುವುದು ಪತ್ತೆಯಾಗಿತ್ತು, ಕೊನ್ನೂರು ಗ್ರಾಮದ 70 ವರ್ಷದ ವೃದ್ದೆಯೊಬ್ಬರು ಲಾರ್ಜ್ ಓರಿಯನ್ ಟ್ಯೂಮರ್ ಅಂದ್ರೆ ಅಂಡಾಶಯದ ಕ್ಯಾನ್ಸರ್ ಗಡ್ಡೆಯಿಂದ ಬಳಲುತ್ತಿದ್ದರು. ಇನ್ನೊಂದು ಕ್ಲಿಷ್ಟಕರ ಚಿಕಿತ್ಸೆಯಲ್ಲಿ ಹಾರೋಬೆಳವಡಿಯ 43 ವರ್ಷದ ಮಹಿಳೆಯು ಫ್ರೈಬ್ರಾಯ್ಡ್ ಗಡ್ಡೆಯಿಂದ ಬಳಲುತ್ತಿದ್ದರು. ಇದನ್ನು ಡಾ. ಶ್ರೀಧರ ದಂಡೆಪ್ಪನವರ ಶಸ್ತ್ರ ಚಿಕಿತ್ಸೆ ಮಾಡುವುದರ ಮೂಲಕ ಮೂವರು ಮಹಿಳೆಯರಿಗೆ ಮರುಜೀವ ನೀಡಿದ್ದಾರೆ.
ಒಟ್ಟಾರೆ ಹೇಳುವುದಾದರೆ ಚಿಟಗುಪ್ಪಿ ಆಸ್ಪತ್ರೆಯ ಈಗ ಬಡವರ ಪಾಲಿನ ಸಂಜೀವಿನಿಯಾಗಿದೆ. ಹೆರಿಗೆ ಜೊತೆ ಸಾಕಷ್ಟು ಮಹಿಳೆಯರ ಕ್ಯಾನ್ಸರ್ ಗಡ್ಡಿಗೆ ಆಪರೇಷನ್ ಮಾಡಿ ಜೀವ ಉಳಿಸಿದ್ದಾರೆ. ಇವರ ಕಾರ್ಯಕ್ಕೆ ಹುಬ್ಬಳ್ಳಿ ಧಾರವಾಡ ಜನತೆ ಧನ್ಯವಾದ ತಿಳಿಸಿದ್ದಾರೆ.