ಧಾರವಾಡ : ಮಲೆನಾಡು ಎಂದು ಕರೆಸಿಕೊಳ್ಳುವ ಧಾರವಾಡ ನಗರದಾದ್ಯಂತ ಜನರು ತಂಪು ಪಾನೀಯ ಮೋರೆ ಹೋಗಿದ್ದು, ಎಳನೀರು ಖರೀದಿ ಮಾಡಲು ಮುಗಿಬಿದ್ದ ದೃಶ್ಯಗಳು ನಗರದ ವಿವಿಧೆಡೆ ಕಂಡುಬಂದವು.
ಬಿಸಿಲಿನಿಂದ 40 ಡಿಗ್ರಿ ಸೆಲ್ಸಿಯಸ್ ತಾಪಮಾನ ಧಾರವಾಡದಲ್ಲಿ ಕಂಡುಬರುತ್ತಿದ್ದು, ಬಿಸಿಲ ಬೇಗೆಗೆ ಬಸವಳಿದ ಜನರು ಎಳನೀರು ಸೇವಿಸಿ ದಾಹ ತಣಿಸಿಕೊಳ್ಳುತ್ತಿದ್ದಾರೆ.
ಬಿಸಿಲ ಬೇಗೆಯಿಂದ ಮಕ್ಕಳು, ವೃದ್ಧರು, ಪ್ರಾಣಿ ಪಕ್ಷಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದ್ದು, ಕುಡಿಯುವ ನೀರಿನ ಸಮಸ್ಯೆಯು ಇದೆ. ತಂಪು ಪಾನೀಯ ಮೊರೆ ಹೋಗಿದ್ದು, ಅದರಂತೆ ಎಳನೀರು ಖರೀದಿ ಮಾಡಲು ಜನರು ಮುಂದಾಗಿದ್ದಾರೆ.