News Karnataka Kannada
Friday, May 03 2024
ಹುಬ್ಬಳ್ಳಿ-ಧಾರವಾಡ

ಲವ್ ಜಿಹಾದ್ ಜೊತೆ ನಾವು ತುಷ್ಟೀಕರಣ ಮಾಡಿದ್ದೀವಾ: ನಿರಂಜಯ್ಯ ಹಿರೇಮಠ

ಈಗಾಗಲೇ ಮಗಳನ್ನು ಕಳೆದುಕೊಂಡು ಬಹಳ ದುಃಖದಲ್ಲಿ ಇದ್ದೇವೆ. ರಾಜ್ಯದ ಮುಖ್ಯಮಂತ್ರಿ ಹೇಳಿಕೆ ನೀಡಿದ್ದು ಖಂಡನೀಯ. ವೈಯಕ್ತಿಕ ಅಂತ ಹೇಳುವುದಕ್ಕೆ ನಾವು ಮುಸ್ಲಿಂ ಸಂಬಂಧಿಕರಾ, ಲವ್ ಜಿಹಾದ್ ಜೊತೆ ನಾವು ತುಷ್ಟೀಕರಣ ಮಾಡಿದ್ದೀವಾ. ಅವರ ಜೊತೆ ವ್ಯಾಪಾರ ಮಾಡುತ್ತೀದ್ದಿವಾ ಎಂದು ನಿರಂಜಯ್ಯ ಹಿರೇಮಠ ಹೇಳಿದರು.
Photo Credit : NewsKarnataka

ಹುಬ್ಬಳ್ಳಿ: ಈಗಾಗಲೇ ಮಗಳನ್ನು ಕಳೆದುಕೊಂಡು ಬಹಳ ದುಃಖದಲ್ಲಿ ಇದ್ದೇವೆ. ರಾಜ್ಯದ ಮುಖ್ಯಮಂತ್ರಿ ಹೇಳಿಕೆ ನೀಡಿದ್ದು ಖಂಡನೀಯ. ವೈಯಕ್ತಿಕ ಅಂತ ಹೇಳುವುದಕ್ಕೆ ನಾವು ಮುಸ್ಲಿಂ ಸಂಬಂಧಿಕರಾ, ಲವ್ ಜಿಹಾದ್ ಜೊತೆ ನಾವು ತುಷ್ಟೀಕರಣ ಮಾಡಿದ್ದೀವಾ. ಅವರ ಜೊತೆ ವ್ಯಾಪಾರ ಮಾಡುತ್ತೀದ್ದಿವಾ ಎಂದು ನಿರಂಜಯ್ಯ ಹಿರೇಮಠ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಈ ರೀತಿ ಹೇಳಿಕೆ ಬರುವುದರಿಂದ ಜನರು ಭಯ ಭೀತಿ ರಾಗಿದ್ದಾರೆ. ಈಡೀ ರಾಜ್ಯ ಇದನ್ನು ನೋಡತ್ತಾ ಇದೆ. ಸವಣೂರು ಶಿವಶಂಕರಪ್ಪಾ ಪೋನ್ ಮಾಡಿದ್ದರು, ನಾವು ಇದ್ದೇವೆ ಭಯ ಪಡಬೇಡ ಅಂತಾ ಹೇಳಿದರು. ನನ್ನ ಮಗಳ ತಪ್ಪು ಇರುವ ತರ ಬಿಂಬಿಸಿ ಸಾಮಾಜಿಕ ಜಾಲತಾಣದಲ್ಲಿ ಬಿಟ್ಟು ಆಕೆಗೆ ಅಪವಾದ ತರುತ್ತಿದ್ದಾರೆ ಎಂದರು.

ಅವನನ್ನು ಎನ್ಕೌಂಟರ್ ಮಾಡಿ, ಗಲ್ಲಿಗೇರಿಸಿದರೆ ಅವಳ ಆತ್ಮಕ್ಕೆ ಶಾಂತಿ ಸಿಗುತ್ತದೆ ಎಂದು ಎರಡು ಬೇಡಿಕೆ ಇತ್ತು. ಅಂತಹದರಲ್ಲಿ ಇಂತಹ ಹೇಳಿಕೆ ನೀಡಿದರೆ ಅವಳ ಆತ್ಮಕ್ಕೆ ಶಾಂತಿ ಕೊಡುವ ಕೆಲಸ ಮಾಡುತ್ತೀಲ್ಲಾ. ಈಗಾಗಲೇ ಬಿಜೆಪಿ ಮುಂಖಡರು ಬಂದಿದ್ದರು, ನಾವು ನಿಮ್ಮ ಜೊತೆ ಅದ್ದೇವಿ ಅಂತಾ ಭರವಸೆ ನೀಡಿದರು. ರಾಜಕೀಯ ಮಾಡುವುದಕ್ಕೆ ಅವರು ಬಂದಿಲ್ಲಾ ಶಾಂತಿ ಸಮಾಧಾನ ಹೇಳಲು ಬಂದಿದ್ದರು ಅಂತಾ ಹೇಳಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು