ಹುಬ್ಬಳ್ಳಿ: ಈಗಾಗಲೇ ಮಗಳನ್ನು ಕಳೆದುಕೊಂಡು ಬಹಳ ದುಃಖದಲ್ಲಿ ಇದ್ದೇವೆ. ರಾಜ್ಯದ ಮುಖ್ಯಮಂತ್ರಿ ಹೇಳಿಕೆ ನೀಡಿದ್ದು ಖಂಡನೀಯ. ವೈಯಕ್ತಿಕ ಅಂತ ಹೇಳುವುದಕ್ಕೆ ನಾವು ಮುಸ್ಲಿಂ ಸಂಬಂಧಿಕರಾ, ಲವ್ ಜಿಹಾದ್ ಜೊತೆ ನಾವು ತುಷ್ಟೀಕರಣ ಮಾಡಿದ್ದೀವಾ. ಅವರ ಜೊತೆ ವ್ಯಾಪಾರ ಮಾಡುತ್ತೀದ್ದಿವಾ ಎಂದು ನಿರಂಜಯ್ಯ ಹಿರೇಮಠ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಈ ರೀತಿ ಹೇಳಿಕೆ ಬರುವುದರಿಂದ ಜನರು ಭಯ ಭೀತಿ ರಾಗಿದ್ದಾರೆ. ಈಡೀ ರಾಜ್ಯ ಇದನ್ನು ನೋಡತ್ತಾ ಇದೆ. ಸವಣೂರು ಶಿವಶಂಕರಪ್ಪಾ ಪೋನ್ ಮಾಡಿದ್ದರು, ನಾವು ಇದ್ದೇವೆ ಭಯ ಪಡಬೇಡ ಅಂತಾ ಹೇಳಿದರು. ನನ್ನ ಮಗಳ ತಪ್ಪು ಇರುವ ತರ ಬಿಂಬಿಸಿ ಸಾಮಾಜಿಕ ಜಾಲತಾಣದಲ್ಲಿ ಬಿಟ್ಟು ಆಕೆಗೆ ಅಪವಾದ ತರುತ್ತಿದ್ದಾರೆ ಎಂದರು.
ಅವನನ್ನು ಎನ್ಕೌಂಟರ್ ಮಾಡಿ, ಗಲ್ಲಿಗೇರಿಸಿದರೆ ಅವಳ ಆತ್ಮಕ್ಕೆ ಶಾಂತಿ ಸಿಗುತ್ತದೆ ಎಂದು ಎರಡು ಬೇಡಿಕೆ ಇತ್ತು. ಅಂತಹದರಲ್ಲಿ ಇಂತಹ ಹೇಳಿಕೆ ನೀಡಿದರೆ ಅವಳ ಆತ್ಮಕ್ಕೆ ಶಾಂತಿ ಕೊಡುವ ಕೆಲಸ ಮಾಡುತ್ತೀಲ್ಲಾ. ಈಗಾಗಲೇ ಬಿಜೆಪಿ ಮುಂಖಡರು ಬಂದಿದ್ದರು, ನಾವು ನಿಮ್ಮ ಜೊತೆ ಅದ್ದೇವಿ ಅಂತಾ ಭರವಸೆ ನೀಡಿದರು. ರಾಜಕೀಯ ಮಾಡುವುದಕ್ಕೆ ಅವರು ಬಂದಿಲ್ಲಾ ಶಾಂತಿ ಸಮಾಧಾನ ಹೇಳಲು ಬಂದಿದ್ದರು ಅಂತಾ ಹೇಳಿದರು.