News Karnataka Kannada
Tuesday, April 30 2024
ಹುಬ್ಬಳ್ಳಿ-ಧಾರವಾಡ

ರೈತರ ಮಕ್ಕಳಿಗೆ ಮದುವೆ ಗ್ಯಾರಂಟಿ ಕೊಡ್ರೀ: ಸರಕಾರಕ್ಕೆ ರೈತ ಮುಖಂಡ ಆಗ್ರಹ

ರೈತನ ಬಗ್ಗೆ ಯಾರೇ ಅವಹೇಳನಕಾರಿ ಹೇಳಿಕೆ ನೀಡುವುದಾಗಲಿ, ಡಿ ಗ್ರೇಡ್ ಪದವನ್ನು ಸಚಿವ, ಶಾಸಕರು ಹೆಚ್ಚಾಗಿ ಮುಖ್ಯಮಂತ್ರಿಗಳು ಬಳಸಿದರೇ ಅವರು ಅಧಿಕಾರದಿಂದ ಕೆಳಗೆ ಇಳಿಯುವವರೆಗೂ ರೈತ ಸಂಘಟನೆಗಳಿಂದ ಹೋರಾಟ ಶತಸಿದ್ದ ಎಂದು ಕರ್ನಾಟಕ ರಾಜ್ಯ ರೈತ ಸಂಘಗಳ ಒಕ್ಕೂಟದ ರೈತ ಮುಖಂಡ ದಯಾನಂದ ಪಾಟೀಲ ಹೇಳಿದರು.
Photo Credit : News Kannada

ಹುಬ್ಬಳ್ಳಿ: ರೈತನ ಬಗ್ಗೆ ಯಾರೇ ಅವಹೇಳನಕಾರಿ ಹೇಳಿಕೆ ನೀಡುವುದಾಗಲಿ, ಡಿ ಗ್ರೇಡ್ ಪದವನ್ನು ಸಚಿವ, ಶಾಸಕರು ಹೆಚ್ಚಾಗಿ ಮುಖ್ಯಮಂತ್ರಿಗಳು ಬಳಸಿದರೇ ಅವರು ಅಧಿಕಾರದಿಂದ ಕೆಳಗೆ ಇಳಿಯುವವರೆಗೂ ರೈತ ಸಂಘಟನೆಗಳಿಂದ ಹೋರಾಟ ಶತಸಿದ್ದ ಎಂದು ಕರ್ನಾಟಕ ರಾಜ್ಯ ರೈತ ಸಂಘಗಳ ಒಕ್ಕೂಟದ ರೈತ ಮುಖಂಡ ದಯಾನಂದ ಪಾಟೀಲ ಹೇಳಿದರು.

ನಗರದಲ್ಲಿಂದು ಮಾತನಾಡಿದ ಅವರು, ರಾಜ್ಯದಲ್ಲಿ ರೈತನಿಗೆ ಹೆಣ್ಣು ಸಿಗುತ್ತಿಲ್ಲ, ಸರ್ಕಾರಿ ನೌಕರಿ ಇದ್ದರೆ ಮಾತ್ರ ಹೆಣ್ಣುಕೊಡುವ ಪದ್ದತಿ ಜಾರಿಯಾಗುತ್ತಿದೆ. ಸರ್ಕಾರ ನಾಲ್ಕು ಗ್ಯಾರಂಟಿಗಳಂತೆ ರೈತನಿಗಾಗಿ ಗ್ಯಾರಂಟಿ ಘೋಷಣೆ ಮಾಡಲಿ ಎಂದು ಒತ್ತಾಯಿಸಿದರು. ಸಾಕಷ್ಟು ರೈತರು ಬೆಳೆವಿಮೆ ಮಾಡಿಸಿದ್ದಾರೆ. ಆದರೆ ಈವರೆಗೆ ರೈತನಿಗೆ ಸಿಕ್ಕಿದ್ದು ಶೇ.10 ರಷ್ಟು ಮಾತ್ರ ಪರಿಹಾರ. ಆ ಹಣದಲ್ಲಿ ರೈತರು ಉದ್ದಾರ ಆಗೋದಕ್ಕೆ ಸಾಧ್ಯವಿದೆಯೇ? ಹೆಚ್ಚಾಗಿ ಬದಕುವುದಕ್ಕೆ ಸಾಧ್ಯವಿದೆಯೇ? ಇವತ್ತು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಾಲಬಾಧೆಯಿಂದ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಬಗ್ಗೆ ಸರ್ಕಾರ ಸಾಂತ್ವನ ಹೇಳುವ ಕೆಲಸ ಮಾಡಿದಿಯೇ? ಎಂದು ಪ್ರಶ್ನೆ ಮಾಡಿದರು.

ಬರ ಪರಿಹಾರ ಘೋಷಣೆಯನ್ನು ಸರ್ಕಾರ ಇದೀಗ ಘೋಷಣೆ ಮಾಡಿದೆ. ಆದರೆ ಆ ಹಣ ಎಷ್ಟು ಫಲಾನುಭವಿಗಳಿಗೆ ತಲುಪಿವೆ? ಈ ಬಗ್ಗೆ ವೈಜ್ಞಾನಿಕ ಬೆಲೆ ನಿಗಧಿಗೆ ಸಮಿತಿ ರಚನೆ ಮಾಡಿ, ಬೆಲೆ ಕಟ್ಟಲು ಸಚಿವರಿಗೆ ಮನವಿ ಮಾಡಿದ್ದೇವೆ. ಆದರೆ ರೈತರ ಬಗ್ಗೆ ಸಚಿವರು ಉಡಾಫೆ ಮಾತು, ಅಶಿಸ್ತು ಉತ್ತರ ನೀಡುವುದು ಸರಿಯಲ್ಲ ಎಂದು ಹರಿಹಾಯ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು