ನವಲಗುಂದ: ವಿವಿಧ ಬೇಡಿಕೆ ಈಡೇರಿಸುವಂತೆ ಸಿಎಂ ಸಿದ್ದರಾಮಯ್ಯರ ಭೇಟಿ ಹಾಗೂ ಬೆಂಗಳೂರಲ್ಲಿ ನಡೆಯಲಿರುವ ಕನ್ನಡ ಜಾಗೃತಿ ವೇದಿಕೆ ಸಮಾವೇಶಕ್ಕೆ ವಾಟಾಳ್ ನಾಗರಾಜ ಬುಲಾವ್ ಹಿನ್ನೆಲೆ ನವಲಗುಂದ ರೈತರು ಬೆಂಗಳೂರಿಗೆ ಪ್ರಯಾಣ ಬೆಳೆಸಿದರು. ಮಹದಾಯಿ ಕಳಸಾ ಬಂಡೂರಿ ನಾಲಾ ಯೋಜನೆ ಕಾಮಗಾರಿ ಪ್ರಾರಂಭಿಸುವ ಕುರಿತು, ಬೆಳೆ ಪರಿಹಾರ, ಬರಪರಿಹಾರ, ರೈತರ ಸಾಲಮನ್ನಾ ಕುರಿತು ಚರ್ಚಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಎಸ್.ಬಿ.ಪಾಟೀಲ, ಮಲ್ಲೇಶ ಉಪ್ಪಾರ, ಯಲ್ಲಪ್ಪ ದಾಡಿಬಾವಿ, ಸಿದ್ದಲಿಂಗಪ್ಪ ಹಳ್ಳದ, ಗಂಗಪ್ಪ ಸಂಗಟಿ, ಬಸನಗೌಡ ಹುಣಸಿಕಟ್ಟಿ ಗೋವಿಂದರೆಡ್ಡಿ ಮೊರಬದ, ಕೆ.ಬಿ. ತಳವಾರ, ಬಸವರಾಜ ಬಳ್ಕೊಳ್ಳಿ, ರುದ್ರಪ್ಪ ಕಾತ್ರಳ, ಚಾಹುಸೇನ್, ಬಾಂಬೆ ಮೇಸ್ತ್ರಿ ಅನೇಕ ರೈತರು ಇದ್ದರು.