ಬೆಂಗಳೂರು: ಬಸವನಗುಡಿಯ ಶ್ರೀ ಕೃಷ್ಣ ಪದವಿ ಕಾಲೇಜಿನಲ್ಲಿ ಭಾನುವಾರ ಬಸವನಗುಡಿ ಕಾಂಗ್ರೆಸ್ ಸಾರ್ವಜನಿಕ ಸೇವಾ ಕೇಂದ್ರ ಸ್ಥಾಪಿಸಿ ಬೃಹತ್ ಉದ್ಯೋಗ ಮೇಳ ಆಯೋಜಸಿದ್ದ ಕಾರ್ಯಕ್ರಮವನ್ನು ಪರಿಷತ್ ಸದಸ್ಯ ಯು.ಬಿ .ವೆಂಕಟೇಶ ಮುಂದಾಳತ್ವ ವಹಿಸಿದ್ದರು.
ವಿಧಾನ ಪರಿಷತ್ ಸದಸ್ಯ ಯು.ಬಿ .ವೆಂಕಟೇಶ ಮಾತನಾಡಿ ಈ ಉದ್ಯೋಗ ಮೇಳದಲ್ಲಿ ಒಳ್ಳೆಯ ಕಂಪನಿಗಳು ಭಾಗವಹಿಸಿವೆ , ಅರ್ಹತೆಗೆ ಅನುಗುಣವಾಗಿ ಉದ್ಯೋಗ ಸಿಕ್ಕೇ ಸಿಗುತ್ತದೆ.
ಒಂದು ಪಕ್ಷ ಈ ಮೇಳದಲ್ಲಿ ಉದ್ಯೋಗ ಸಿಗದೇ ಇರುವ ಅಭ್ಯರ್ಥಿಗಳು ನಿರಾಶರಾಗದೆ ಇಂದೇ ಮತ್ತೊಮ್ಮೆ ತಮ್ಮ ವಿವರ ಧಾಖಲಿಸಿ ನಮಗೆ ತಿಳಿಸಿದರೆ ಅವರಿಗೆ ಬೇರೆ ಯಾವುದಾದರೂ ಕಂಪನಿಯಲ್ಲಿ ಕೆಲಸ ಕೊಟ್ಟೇ ಕೊಡಿಸುವ ಭರವಸೆ ನೀಡಿದರು.
ನೀವು ಉದ್ಯೋಗ ಪಡೆಯುವುದಲ್ಲದೆ ನೀವೆ ಇನ್ನತರರಿಗೆ ಉದ್ಯೋಗ ಕಲ್ಪಿಸಿಕೊಡುವತಾಗಬೇಕು ಎಂಬುದೇ ಈ ಉದ್ಯೋಗ ಮೇಳದ ಆಶಯ ಎಂದು ತಿಳಿಸಿದ ಅವರು, ಈ ಉದ್ಯೋಗ ಮೇಳದ ಇನ್ನೊಂದು ವಿಶೇಷತೆ ಎಂದರೆ ವಿಶೇಷಚೇತನರಿಗೂ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಅವರಿಗೂ ಕೂಡ ಅವರ ಅರ್ಹತೆಗೆ ಅನುಗುಣವಾದ ಕೆಲಸ ಇಲ್ಲಿ ಸಿಗದೇ ಇದ್ದ ಪಕ್ಷದಲ್ಲಿ ಅವರಿಗೂ ನಿರಾಶೆ ಆಗದಹಾಗೆ ಇನ್ನಿತರೆ ಕಂಪನಿಯ ಉದ್ಯೋಗ ಕೊಡಿಸಲಾಗುವುದು ಎಂದು ಭರವಸೆ ನೀಡಿದರು .
ಇದರಲ್ಲಿ ಸುಮಾರು 100 ವಿವಿಧ ಕಂಪನಿಗಳು ಭಾಗವಹಿಸಿದ್ದು ಉದ್ಯೋಗ ಮೇಳದಲ್ಲಿ ಸ್ಥಳದಲ್ಲೇ ಸಂದರ್ಶನ ನಡೆಸಿ ಆಯ್ಕೆಯಾದ ಅರ್ಹ ಅಭ್ಯರ್ಥಿಗಳು ಸ್ಥಳದಲ್ಲೇ ನೇಮಕಾತಿ ಪತ್ರ ಪಡೆದುಕೊಡದ್ದು ಅಭ್ಯರ್ಥಿಗಳಿಗೆ ಇನ್ನಷ್ಟು ಖುಷಿ ತಂದು ಕೊಟ್ಟಿತು.
ಬೆಂಗಳೂರಿನಲ್ಲೇ ಇರುವ ಅಂತರ ರಾಷ್ಟ್ರೀಯ ಮಟ್ಟದ ಕಂಪನಿಗಳು ಆಯ್ಕೆಯಾದ ಅರ್ಹ ಅಭ್ಯರ್ಥಿಗಳಿಗೆ ಸೂಕ್ತ ಮಾಸಿಕ ಸಂಬಾವನೆ ನೀಡುವುದರಲ್ಲೂ ಹಿಂದೆ ಬೀಳಲಿಲ್ಲ.
ಕೆಲಸ ಹುಡುಕುತ್ತಿರುವ ಉದ್ಯೋಗಾಂಕ್ಷಿಗಳಿಗೆ ಉತ್ತಮ ವೇದಿಕೆ ಕಲ್ಪಿಸಿಕೊಡುತ್ತಿರುವ ವಿಧಾನ ಪರಿಷತ್ ಸದಸ್ಯ ಯು.ಬಿ .ವೆಂಕಟೇಶ ಅವರಿಗೆ ಪಲಾನುಭವಿಗಳು ವಂದನೆ ಸಲ್ಲಿಸಿದರು.
ಕಾಂಗ್ರೆಸ್ ಮುಖಂಡ ಕೆ .ಎಸ್ .ನಾಗರಾಜ್ ಮಾತನಾಡಿ ಯುವಕರ ವಿಧ್ಯೆ , ಉದ್ಯೋಗದ ಬಗ್ಗೆ ಕಾಳಜಿ ವಹಿಸಿ ಇಂತಃ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವ ಯು.ಬಿ .ವೆಂಕಟೇಶ ಅವರನ್ನ ಶ್ಲಾಘಿಸಿದರು .
ಕಾರ್ಯಕ್ರಮದಲ್ಲಿ ಉದ್ಯಮಿ ಗಣೇಶ್ , ವಿಧಾನ ಪರಿಷತ್ ಸದಸ್ಯ ಯು.ಬಿ .ವೆಂಕಟೇಶ , ಕಾಂಗ್ರೆಸ್ ಮುಖಂಡರಾದ ಕೆ.ಎಸ್.ನಾಗರಾಜ್, ನಟರಾಜಗೌಡ , ಗೌತಮ್ ಮುಂತಾದವರು ಉಪಸ್ಥಿತರುದ್ದರು .