ಧಾರವಾಡ: ಧಾರವಾಡ ಗ್ರಾಮೀಣ ಕ್ಷೇತ್ರದ ಬಿಜೆಪಿ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡು ಬಿಜೆಪಿಯಿಂತ ದೂರ ಉಳಿದಿದ್ದ ಮಾಜಿ ಶಾಸಕಿ ಸೀಮಾ ಮಸೂತಿ ಅವರ ಮನವೊಲಿಸುವಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಯಶಸ್ವಿಯಾಗಿದ್ದಾರೆ.
ಸೀಮಾ ಮಸೂತಿ ಅವರ ಮನೆಗೆ ಭೇಟಿ ನೀಡಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು, ಸೀಮಾ ಮಸೂತಿ ಅವರ ಆರೋಗ್ಯ ವಿಚಾರಿಸಿದರು. ಆನಂತರ ಅವರ ಮನವೊಲಿಸಿ ಬಿಜೆಪಿ ಅಭ್ಯರ್ಥಿ ಅಮೃತ ದೇಸಾಯಿ ಅವರ ಗೆಲುವಿಗೆ ಶ್ರಮಿಸುವಂತೆ ಮನವೊಲಿಸಿದರು.
ಸಚಿವರಿಗೆ ಸಮ್ಮತಿ ಸೂಚಿಸಿದ ಸೀಮಾ ಮಸೂತಿ, ಈಗಾಗಲೇ ಅಮೃತ ದೇಸಾಯಿ ಪರ ಪ್ರಚಾರ ಮಾಡಲು ಅಖಾಡಕ್ಕಿಳಿದಿದ್ದಾರೆ. ಹನುಮನಹಾಳ ಹಾಗೂ ಉಪ್ಪಿನ ಬೆಟಗೇರಿಯಲ್ಲಿ ಸೀಮಾ ಮಸೂತಿ ಅಮೃತ ದೇಸಾಯಿ ಪರ ಪ್ರಚಾರ ಆರಂಭಿಸಿದ್ದಾರೆ. ಸೀಮಾ ಮಸೂತಿ ಅವರ ಮನೆಗೆ ಕೇಂದ್ರ ಸಚಿವರು ಭೇಟಿ ನೀಡಿದ ಸಂದರ್ಭದಲ್ಲಿ ಬಸವರಾಜ ಕೊರವರ, ಗುರುನಾಥಗೌಡ ಗೌಡರ, ಮೇಯರ್ ಈರೇಶ ಅಂಚಟಗೇರಿ, ನಿತಿನ್ ಇಂಡಿ, ಶಂಕರ ಮುಗದ ಸೇರಿದಂತೆ ಅನೇಕರು ಇದ್ದರು.