ಧಾರವಾಡ: ಕರ್ನಾಟಕ ವಿಧಾನಸಭಾ ಚುನಾವಣೆ 2023 ರ ಧಾರವಾಡ-71 ಮತ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಮೃತ ದೇಸಾಯಿ ಅವರ ಜೊತೆ ಜಂಟಿಯಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ರವರ ನೇತೃತ್ವದಲ್ಲಿ ಧಾರವಾಡ ತಾಲೂಕಿನ ಮದಿಹಾಳ, ಹೊಸ ಯಲ್ಲಾಪುರ ಹಾರೋಬೆಳವಡಿ ಹಾಗೂ ಉಪ್ಪಿನ ಬೆಟಿಗೇರಿ ಗ್ರಾಮಗಳಲ್ಲಿ ಸಾರ್ವಜನಿಕ ಸಭೆ ಹಾಗೂ ಮನೆ-ಮನೆ ಭೇಟಿ ನೀಡಿ ಮತಯಾಚನೆ ಮಾಡಲಾಯಿತು.
ಈ ಸಂದರ್ಭದಲ್ಲಿ ಬಸವರಾಜ ಕುಂದಗೋಳಮಠ, ಶ್ರೀ ಈರೇಶ್ ಅಂಚಟಗೇರಿ, ನಿತಿನ್ ಇಂಡಿ, ಗುರುನಾಥಗೌಡ ಗೌಡರ, ಜ್ಯೋತಿ ಪ್ರಹ್ಲಾದ ಜೋಶಿ, ಪ್ರಿಯಾ ಅಮೃತ ದೇಸಾಯಿ ಸೇರಿದಂತೆ ಪಕ್ಷದ ಪ್ರಮುಖರು, ಮಹಿಳಾ ಪ್ರಮುಖರು, ಕಾರ್ಯಕರ್ತರು ಪಾಲ್ಗೊಂಡಿದ್ದರು.