ಧಾರವಾಡ: ನವವೃಂದಾವನದಲ್ಲಿರುವ ಉತ್ತರಾಧಿಮಠದ ರಘುವರ್ಯತೀರ್ಥ ಮೂಲ ವೃಂದಾವನವನ್ನೇ ಜಯತೀರ್ಥರ ವೃಂದಾವನ ಎಂದು ಅಪಪ್ರಚಾರ ಮಾಡಲಾಗುತ್ತಿದ್ದು, ಕೂಡಲೇ ಇದನ್ನು ತಡೆಯಬೇಕು ಎಂದು ಆಗ್ರಹಿಸಿ ಜಯತೀರ್ಥ ಭಕ್ತವೃಂದದಿಂದ ಧಾರವಾಡದಲ್ಲಿ ಪ್ರತಿಭಟನೆ ನಡೆಸಲಾಯಿತು.
ಧಾರವಾಡದ ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಭಕ್ತರು, ಅಲ್ಲಿನ ಆರಾಧನೆ ಹಾಗೂ ಪೂಜೆಗಳನ್ನು ತಡೆಯಬೇಕು. ಅಲ್ಲಿ ಇತಿಹಾಸ ತಿರುಚುವ ಕಾರ್ಯ ಆಗುತ್ತಿದೆ. ಜಯತೀರ್ಥ ಭಕ್ತರ ಭಾವನೆಗಳಿಗೆ ಘಾಸಿಯಾಗುತ್ತಿದೆ. ಈ ವಿಷಯದಲ್ಲಿ ಗೊಂದಲ ಸೃಷ್ಟಿಸಲು ಅನುವು ಮಾಡಿಕೊಡದಂತೆ ಜಿಲ್ಲಾಧಿಕಾರಿ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.