ಹುಬ್ಬಳ್ಳಿ: ಬಿಜೆಪಿ ಡಂಬಲ್ ಇಂಜಿನ್ ಸರ್ಕಾರ ಎನ್ನುತ್ತಾರೆ. ಕಳೆದ 14 ವರ್ಷದಲ್ಲಿ 8 ವರ್ಷ ಗಳ ಕಾಲ ಬಿಜೆಪಿಯವರು ಆಳ್ವಿಕೆ ನಡೆಸಿದ್ದಾರೆ. 2008 ರಿಂದ 13 ವರ್ಷ ಆಳ್ವಿಕೆ ಮಾಡಿದ್ದಾರೆ. ಹುಬ್ಬಳ್ಳಿಯಲ್ಲಿ ಹಲವಾರು ರಸ್ತೆಯಲ್ಲಿ ಹೋದಾಗ ರಸ್ತೆ ಪರಿಸ್ಥಿತಿ ನೋಡಿ ಆಶ್ಚರ್ಯ ಆಯ್ತು. ಹುಬ್ಬಳ್ಳಿ ನಗರ ಅಭಿವೃದ್ಧಿಗೆ ಕೋಟ್ಯಾಂತರ ರೂಪಾಯಿ ವ್ಯಯ ಮಾಡಿದ್ದಾರೆ. ಆದರೆ ರಸ್ತೆಗಳ ಸ್ಥಿತಿ ಹೀಗಿದೆ ಎಂದು ಮಾಜಿ ಸಿಎಂ ಕುಮಾರ ಸ್ವಾಮಿ ವ್ಯಂಗ್ಯವಾಡಿದರು.
ಪಂಚರತ್ನ ಯಾತ್ರೆಯಲ್ಲಿ ಮಾತನಾಡಿದ ಈ ಕುರಿತು ಮಾತನಾಡಿದರು. ಹಾಲರವಿ ಅವರು ಸಿದ್ದಾರೂಢ ಮಠಕ್ಕೆ ಆಶೀರ್ವಾದ ಪಡೆಯಲು ಕರೆದುಕೊಂಡು ಹೋದ್ರು. ಗದ್ದುಗೆಗೆ ಭೇಟಿ ಕೊಟ್ಟು ಪ್ರಾರ್ಥನೆ ಸಲ್ಲಿಸಿದ ನಂತರ ಹೊರಟಾಗ 5 ರಿಂದ 6 ಜನ ಹೆಣ್ಣು ಮಕ್ಕಳಿಗೆ ನಿವೇಶ , ಮನೆ ಇಲ್ಲಾ. ಮಠದಲ್ಲಿ ಸಾಯಂಕಾಲ ಮಲಗಲು ಹೋದ್ರೆ ಪೊಲೀಸರು ಹೊಡೆಯುತ್ತಾರೆ. ನಮ್ಮ ಗಂಡಂದಿರು ತೀರಿಕೊಂಡಿದ್ದಾರೆ. ಕೆಲವರು ನಮ್ಮನ್ನು ಬಿಟ್ಟಿದ್ದಾರೆ. ಮಠದಲ್ಲಿ ಇದ್ರೆ ರಕ್ಷಣೆ ಸಿಗಬಹುದು ಎಂಬ ನಂಬಿಕೆಯಿಂದ ಹೋದ್ರೆ ಕಿರುಕುಳ ಕೊಡುತ್ತಾರೆ ಎಂದು ಕಣ್ಣೀರು ಹಾಕತ್ತಾರೆ ಎಂದು ಮಹಿಳೆಯರು ತಮ್ಮ ನೋವು ತೊಡಿಕೊಂಡರು ಎಂದು ಹೇಳಿದರು.
5 ವರ್ಷ ಅಧಿಕಾರ ಕೊಡಿ, 5 ಯೋಜನೆಗಳನ್ನು ಜಾರಿಗೆ ತಂದು ಬದುಕು ಬದಲಿಸುವೆ : ಕುಮಾರಸ್ವಾಮಿ
ಪಂಚರತ್ನ ಎನ್ನುವ 5 ಯೋಜನೆಗಳನ್ನು ರಾಜ್ಯದಲ್ಲಿ ಜಾರಿಗೆ ತರಲು ತಮ್ಮೆಲ್ಲರ ಆಶೀರ್ವಾದ ಬೇಕು. ಒಂದು ಬಾರಿ ಜೆಡಿಎಸ್ ಗೆ 5 ವರ್ಷದ ಸರ್ಕಾರ ನೀಡಿದರೆ ಈ 5 ಕಾರ್ಯಕ್ರಮ ಮುಖಾಂತರ ನಿಮ್ಮ ಬದುಕನ್ನು ಹಸನು ಮಾಡುತ್ತೇನೆ ಎಂದರು.
ಇಡೀ ರಾಜ್ಯದಲ್ಲಿ ಕಳೆದ 4 ವರೆ ತಿಂಗಳಿಂದ ದಿನಕ್ಕೆ 15 ರಿಂದ 16 ಗಂಟೆ ಪ್ರವಾಸ ಮಾಡುತ್ತಿದ್ದೇನೆ. 2 ಬಾರಿ ಹೃದಯದ ಚಿಕಿತ್ಸೆ ಆಗಿದ್ದರೂ ನಿಮ್ಮ ಬದುಕನ್ನು ಸರಿಪಡಿಸಲು ಒಂದು ಒಳ್ಳೆಯ ಸರ್ಕಾರ ತರಬೇಕು ಎಂದು ಹೋರಾಟ ಮಾಡುತ್ತಿದ್ದೆನೆ . ನಮ್ಮ ಸರಕಾರ ಅಧಿಕಾರಕ್ಕೆ ಬಂದಲ್ಲಿ ಶ್ರೀಮಂತ ಮಕ್ಕಳಿಗೆ ಸರಿಸಾಟಿಯಾಗಿ ನಿಮ್ಮ ಕುಟುಂಬದ ಮಕ್ಕಳು ಸಹ ಅತ್ಯುತ್ತಮ ಶಾಲೆಗಳಲ್ಲಿ ಅಭ್ಯಾಸ ಮಾಡಬಹುದು ಎಂದರು.