ಧಾರವಾಡ : ಜಿಲ್ಲೆಯ ನವಲಗುಂದ ವಿಧಾನಸಭಾ ಮತಕ್ಷೇತ್ರ-69 ರ ಅಣ್ಣಿಗೇರಿ ನಗರದ ನಿವಾಸಿ ವಾಕರಸಾ ಸಂಸ್ಥೆಯಲ್ಲಿ ಕಂಡಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತೀದ್ದ ಕರಿಸಿದ್ದಪ್ಪ ಪೂಜಾರ ಅವರ ಪುತ್ರ ಸಿದ್ಧಲಿಂಗಪ್ಪ ಪೂಜಾರ ಅವರು ಖಾಸಗಿ ಐಟಿ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಾ ಕೇಂದ್ರ ಲೋಕಸೇವಾ ಅಯೋಗ (UPSC) ಪರೀಕ್ಷೆಯಲ್ಲಿ 589ನೇ ರ್ಯಾಂಕ್ ಪಡೆದು ಕ್ಷೇತ್ರದ ಕೀರ್ತಿಯನ್ನು ಹೆಚ್ಚಿಸಿದ್ದು ಇಂದು ಸಿದ್ಧಲಿಂಗಪ್ಪ ಪೂಜಾರನನ್ನು ಭೇಟಿಯಾದ ಶಾಸಕ ಎನ್ಎಚ್.ಕೋನರೆಡ್ಡಿ ಅವರು ಸನ್ಮಾನಿಸಿ ಶುಭಕೋರಿದರು.
ಈ ಸಂದರ್ಭದಲ್ಲಿ ಧಾರವಾಡ ಜಿಲ್ಲಾ ಗ್ರಾಮೀಣ ಯುವ ಕಾಂಗ್ರೆಸ್ ಅಧ್ಯಕ್ಷ ವಿನೋದ ಅಸೂಟಿ, ನವಲಗುಂದ ಪುರಸಭೆ ಮಾಜಿ ಅಧ್ಯಕ್ಷ ಜೀವನ ಪವಾರ ಉಪಸ್ಥಿತರಿದ್ದರು.