ಹುಬ್ಬಳ್ಳಿ: ಆಮ್ ಆದ್ಮಿ ಪಾರ್ಟಿ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಅವರು, ವಾಣಿಜ್ಯ ನಗರಿ ಹುಬ್ಬಳ್ಳಿಗೆ ಆಗಮಿಸಿದ ಹಿನ್ನೆಲೆಯಲ್ಲಿ, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಚಿಟಗುಪ್ಪಿ ಆಸ್ಪತ್ರೆಯನ್ನು ವೀಕ್ಷಣೆ ಮಾಡಿ ರೋಗಿಗಳ ಆರೋಗ್ಯವನ್ನು ವಿಚಾರಿಸಿದರು.
ವೀಕ್ಷಣೆ ಮಾಡಿದ ಮುಖ್ಯಮಂತ್ರಿ ಚಂದ್ರು ಅವರು, ಆಸ್ಪತ್ರೆಗೆ ಇನ್ನೂ ಏನು ಬೇಕು ಮತ್ತು ಯಾವ ರೀತಿಯ ಕುಂದು ಕೊರತೆಗಳನ್ನು ವೈದ್ಯರ ಮೂಲಕ ವಿಚಾರಿಸಿದರು. ಅಷ್ಟೇ ಅಲ್ಲೆ ಸ್ಮಾರ್ಟ್ ಸಿಟಿ ಅಡಿಯಲ್ಲಿ ತಯಾರಿಸಿದ ಹೊಸ ಕಟ್ಟಡವನ್ನೂ ಕೂಡ ವೀಕ್ಷಣೆ ಮಾಡಿದರು.
ಈ ಸಂದರ್ಭದಲ್ಲಿ ಆಪ್ ಜಿಲ್ಲಾಧ್ಯಕ್ಷ ಪ್ರವೀಣ ನಡಗಟ್ಟಿ, ರಾಜ್ಯ ಕಾರ್ಯದರ್ಶಿ ಅನಂತ್ಕುಮಾರ ಬುಗಡಿ, ಬಸವರಾಜ ತೇರದಾಳ ಸೇರಿದಂತೆ ಆಮ್ ಆದ್ಮ ಪಕ್ಷದ ಮುಖಂಡರು ಇದ್ದರು.