ಹುಬ್ಬಳ್ಳಿ: ಹುಬ್ಬಳ್ಳಿ ಸೆಂಟ್ರಲ್ ಕ್ಷೇತ್ರ ಬಿಜೆಪಿಯ ಭದ್ರಕೋಟೆಯಾಗಿತ್ತು. ಆದರೆ ಬಿಜೆಪಿ ಮುಖಂಡರು ಅದರ ತಳಪಾಯ ಹಾಳು ಮಾಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದರು.
ನಗರದಲ್ಲಿ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶೆಟ್ಟರ್ ಸೋಲಿಸಲು ಬಿಜೆಪಿ ಅಜೆಂಡಾ ಮಾಡಿದೆ.ನಾನು ಏನು ಅನ್ಯಾಯ ಮಾಡಿದ್ದೇನೆ…? ನನ್ನಿಂದ ಬಿಜೆಪಿಗೆ ಏನು ಅನ್ಯಾಯವಾಗಿದೆ ? ನನಗೆ ಅಧಿಕಾರದ ಆಸೆ ಇಲ್ಲ. ಶಾಸಕನಾಗಬೇಕು ಅಂದುಕೊಂಡಿದ್ದೆ.22 ವರ್ಷ ಶಾಸಕನಾಗಿದ್ದೇನೆ. ಜನರ ಜೊತೆಗೆ ಇರುವುದು ನನ್ನ ಮಹದಾಸೆ. ಹಿಂದಿನ ಬಾಗಿಲ ರಾಜಕಾರಣ ನನಗೆ ಹಿಡಿಸುವುದಿಲ್ಲ.ರಾಜಪಾಲರಾಗುವುದರಿಂದ ರಾಜ್ಯಸಭಾ ಮೇಂಬರ್ ಆಗುವುದು ನನಗೆ ಇಷ್ಟ ಇಲ್ಲ.ಜನರ ಮಧ್ಯದಲ್ಲಿ ಇದನ್ನು ಹೇಳಿದಾಗ ಜನರೇ ಅರ್ಥ ಮಾಡಿಕೊಂಡಿದ್ದಾರೆ. ನನಗೆ ಜಯ ನಿಶ್ಚಿತ ಎಂದರು,
ನಾನು ಸಂಘಟನೆ ಮಾಡಿದ್ದಕ್ಕೆ ಬಿಜೆಪಿಗೆ ಶಕ್ತಿ ಬಂದಿದೆ. ಜೀರೋ ಇದ್ದಲ್ಲಿಂದ ಬಿಜೆಪಿ ಕಟ್ಟಿ ಬೆಳೆಸಿದ್ದೇನೆ. ಧಾರವಾಡ ಗ್ರಾಮೀಣ, ಕಲಘಟಗಿ, ನವಲಗುಂದ ಯಾಕೆ ಸ್ಟ್ರಾಂಗ್ ಆಗಿಲ್ಲ. ಈ ಕ್ಷೇತ್ರವನ್ನು ಸ್ಟ್ರಾಂಗ್ ಮಾಡಲು ಸಾಕಷ್ಟು ಶ್ರಮಿಸಿದ್ದೇನೆ. .ಜನರು ಶೆಟ್ಟರ್ ಗೆಲ್ಲಿಸುವ ಬಗ್ಗೆ ನಿರ್ಧಾರ ಮಾಡಿದ್ದಾರೆ. ಬಿಜೆಪಿ ಸ್ಟ್ರಾಂಗ್ ಇದೆ ಅಂತ ಶಾ ಹೇಳಿದರು ಅದನ್ನು ಮಾಡಿದವ ರು ಶೆಟ್ಟರ್ ಎಂದರು.