ಹುಬ್ಬಳ್ಳಿ: ನಗರದ ಜನತಾ ಬಜಾರ್ ಹೊಸ ಕಟ್ಟಡದ ಕೆಳಗೆ, ಕೋಣೆ ಒಂದರಲ್ಲಿ ಯುವಕನೊಬ್ಬನ ಮೃತದೇಹ ಪತ್ತೆಯಾಗಿದ್ದು, ನೀರಿನಲ್ಲಿ ಅರ್ಧ ದೇಹ ಬಿದ್ದು ಕೊಳೆತು ದುರ್ವಾಸನೆ ಬಂದಿದ್ದರಿಂದ ಅಲ್ಲಿನ ಸ್ಥಳಿಯರು ಹೋಗಿ ನೋಡಿದಾಗ ಶವ ಪತ್ತೆಯಾಗಿದೆ.
ಜನತಾ ಬಜಾರ ಹೊಸ ಕಟ್ಟಡವನ್ನು ಕಟ್ಟಿ ವರ್ಷಗಳೆ ಕಳೆದಿವೆ. ಕೆಳಗಿನ ಒಂದು ಕೋಣೆಯಲ್ಲಿ ಯುವಕನ ಮೃತದೇಹ ಪತ್ತೆಯಾಗಿದೆ. ದುರ್ವಾಸನೆ ಬರುತ್ತಿದ್ದಂತೆ ಜನರು ಅಲ್ಲಿ ಹೋಗಿ ನೋಡಿದ್ದಾರೆ. ಕೂಡಲೆ ಹುಬ್ಬಳ್ಳಿ ಉಪನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಉಪನಗರ ಪೊಲೀಸ ಇನ್ಸೆಕ್ಟರ್ ಹಾಗೂ ಸಿಬ್ಬಂದಿಗಳು ಪರಿಶೀಲನೆ ನಡೆಸಿ ಮೃತ ವ್ಯಕ್ತಿಯ ಮರಣೋತ್ತರ ಪರೀಕ್ಷೆ ನಡೆಸಲು ಮೃತ ದೇಹವನ್ನು ಕಿಮ್ಸ್ ಶವಗಾರಕೆ ಸಾಗಿಸಿದ್ದು, ಇನ್ನು ತನಿಖೆ ನಂತರವೇ ಇದು ಕೊಲೆನಾ ಅಥವಾ ಮೇಲಿಂದ ಬಿದ್ದು ಮೃತಪಟ್ಟಿದ್ದಾರ ಎಂದು ತಿಳಿದು ಬರಬೇಕಾಗಿದೆ.