ಕಲಘಟಗಿ: ಛತ್ರಪತಿ ಶಿವಾಜಿ ಮಹಾರಾಜರಿಗೆ ಸಾಮಾಜಿಕ ಜಾಲತಾಣದಲ್ಲಿ ಅವಮಾನ ಮಾಡಿರುವ ಹಿನ್ನೆಲೆಯಲ್ಲಿ ಇಂದು ಕಲಘಟಗಿ ಪಟ್ಟಣದ ಅಂಜುಮನ್ ಸಂಸ್ಥೆಯವರು ಖಂಡಿಸಿದ್ದಾರೆ.
ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅಂಜುಮನ್ ಸಂಸ್ಥೆಯ ಅಧ್ಯಕ್ಷರಾದ ಅಜಮತ್ ಜಾಗೀರದಾರ ಕಿಡಿಗೇಡಿಗಳು ಮಾಡಿರುವ ಇಂತಹ ಕೃತ್ಯಕ್ಕೆ ನಾವು ಖಂಡಿಸುತ್ತೆವೆ. ತಾಲೂಕಿನಲ್ಲಿ ಹಿಂದೂ ಮುಸ್ಲಿಂ ಭಾಂದವರು ಅನ್ನೋನ್ಯತೆಯಿಂದ ಇದ್ದೆವೆ ಕೆಲವು ಕಿಡಿಗೇಡಿಗಳು ಈ ರೀತಿಯಾದ ಕೃತ್ಯಗಳನ್ನು ಮಾಡಿದ್ದು ಅವರಿಗೆ ಕಠಿಣ ಶಿಕ್ಷೆಯಾಗಬೇಕು ಎಂದರು.
ಅದೆ ರೀತಿ ಇದರ ವಿರುದ್ಧ ನಮ್ಮ ಅಂಜುಮನ್ ಸಂಸ್ಥೆ ಹಾಗೂ ತಾಲೂಕಿನ ಎಲ್ಲ ಮುಸಲ್ಮಾನ ಭಾಂದವರು ಕೂಡಿಕೊಂಡು ಈ ಕೃತ್ಯೆ ಮಾಡಿರುವವರಿಗೆ ಕಠಿಣ ಶಿಕ್ಷೆಯಾಗಬೇಕು ಇದರ ಹಿಂದೆ ಯಾರ ಕೈವಾಡವಿದೆ ಎಂದು ಪತ್ತೆ ಹಚ್ಚಬೇಕು ಎಂದು ಕಲಘಟಗಿ ತಹಶೀಲ್ದಾರ್ ಹಾಗೂ ಪೋಲಿಸ್ ಠಾಣೆಗೆ ಮನವಿ ಸಲ್ಲಿಸಲಿದ್ದೇವೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.