ಕಲಘಟಗಿ: ಪಟ್ಟಣದಲ್ಲಿಯ ಹನ್ನೆರಡು ಸಾವಿರ ಮಠದ ಲಿಂಗೈಕ್ಕೆ ವೀರ ತಪಸ್ವಿ ಶ್ರೀ ಶ್ರೀ ಮಡಿವಾಳೇಶ್ವರ ಸ್ವಾಮಿಗಳ ಕರ್ತೃ ಗದ್ದುಗೆಗೆ ಪಾದರಕ್ಷೆಯನ್ನು ಧರಿಸಿ ಅಪಮಾನ ಮಾಡಿರುವ ಹಿನ್ನೆಲೆ ಆಪ್ ಪಕ್ಷದ ಪ್ರಚಾರ ಸಮೀತಿಯ ಅಧ್ಯಕ್ಷರು ಹಾಗೂ ಚಲನಚಿತ್ರ ನಟ ಮುಖ್ಯಮಂತ್ರಿ ಚಂದ್ರು ಅವರು ಪಟ್ಟಕ್ಕೆ ಆಗಮಿಸಿ ಹನ್ನೆರಡು ಸಾವಿರ ಮಠದಲ್ಲಿ ಆಯೋಜನೆ ಮಾಡಿದ ಎಎಪಿ ಪಕ್ಷದ ಕಾರ್ಯಕ್ರಮ ಒಂದರಲ್ಲಿ ಭಾಗಿಯಾಗಿ ಗುರುಗಳು ಕರ್ತೃಗದ್ದುಗೆಯ ಬಳಿ ಪಾದರಕ್ಷೆ ಧರಿಸಿ ಕಾರ್ಯಕ್ರಮ ಉದ್ಘಾಟಿಸಿ ಶ್ರೀ ಮಠಕ್ಕೆ ಅಪಮಾನ ಮಾಡಿದ್ದಾರೆ.
ಇದರಿಂದ ಹನ್ನೆರಡು ಸಾವಿರ ಮಠದ ಟ್ರಸ್ಟ ಕಮೀಟಿ ಹಾಗೂ ತಾಲೂಕಿನ ಸರ್ವಧರ್ಮದರು ನಟ ಮುಖ್ಯಮಂತ್ರಿ ಚಂದ್ರು ಅವರ ಮೇಲೆ ಆಕ್ರೋಶಗೊಂಡು ಅಪಮಾನ ಮಾಡಿದ ನಟರು ಕಲಘಟಗಿ ಗೆ 48 ಘಂಟೆಯ ವಳಗೆ ಆಗಮಿಸಿ ಶ್ರೀ ರೇವಣಸಿದ್ದ ಶಿವಾಚಾರ್ಯ ಹಾಗೂ ಕಲಘಟಗಿ ಜನರ ಮುಂದೆ ಬಂದು ಬಹಿರಂಗ ಕ್ಷಮೆ ಯಾಚಿಸಬೇಕು.
ಒಂದು ವೇಳೆ ಕ್ಷಮೆ ಕೊರೆದಿದ್ದರೆ 48 ಘಂಟೆ ನಂತರ ಕಾರವಾರ-ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿಯನ್ನು ತಡೆದು ಉಗ್ರ ಪ್ರತಿಭಟನೆ ಮಾಡುವುದಾಗಿ ಇಂದು ತಹಸೀಲ್ದಾ ರವರಿಗೆ ಮನವಿ ಸಲ್ಲಿಸಿದರು. ಒಂದು ವೇಳೆ ಕ್ಷಮೆ ಕೊರೆದಿದ್ದರೆ 48 ಘಂಟೆ ನಂತರ ಕಾರವಾರ-ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿಯನ್ನು ತಡೆದು ಉಗ್ರ ಪ್ರತಿಭಟನೆ ಮಾಡುವುದಾಗಿ ಇಂದು ತಹಸೀಲ್ದಾ ರವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸದಾನಂದ ಚಿಂತಾಮಣಿ, ಬಸವರಾಜ ಕರಡಿಕೋಪ್ಪ, ನಿಂಗಪ್ಪ ಸುತಗಟ್ಟಿ, ಸುನಿಲ ಗಬ್ಬರ, ಬ್ರಹ್ಮಕುಮಾರ ಅಳಗವಾಡಿ, ಪರಶುರಾಮ ಹೂಲಿಹೋಂಡ ಮುಂತಾದವರು ಉಪಸ್ಥಿತರಿದ್ದರು.