ಹುಬ್ಬಳ್ಳಿ : ದೇಶ ಸೇವೆ ಸಲ್ಲಿಸಿ ಮರಳಿ ತಮ್ಮ ಸ್ವಗ್ರಾಮಕ್ಕೆ ಆಗಮಿಸಿದ, ವೀರ ಯೋಧನನ್ನು ಗ್ರಾಮಸ್ಥರು ಊರಿನಲ್ಲಿ ಮೆರವಣಿಗೆ ಮಾಡುವುದರ ಮೂಲಕ, ಗೌರವ ಸಲ್ಲಿಸಿರುವ ಸುಂದರ ಕ್ಷಣ ಹುಬ್ಬಳ್ಳಿ ತಾಲ್ಲೂಕಿನ ಗಂಗಿವಾಳ ಗ್ರಾಮದಲ್ಲಿ ಜರುಗಿದೆ.
ಗಂಗಿವಾಳ ಗ್ರಾಮದ ಸೈನಿಕ ರಾಜೆ ಸಾಜೆಸಾಬ ಮೌಲಾಸಾಬ ಸುಲ್ತಾನ ಎಂಬ ಯೋಧ, 22 ವರ್ಷಗಳ ಕಾಲ ದೇಶ ಸೇವೆ ಸಲ್ಲಿಸಿ, ಮರಳಿ ತಮ್ಮ ಸ್ವಗ್ರಾಮಕ್ಕೆ ಆಗಮಿಸಿದಾಗ ಗ್ರಾಮದ ಗುರು ಹಿರಿಯರು, ಯುವಕರು, ಸ್ತ್ರೀ ಸಂಘದವರು ಆರತಿ ಎತ್ತಿ ಸ್ವಾಗತ ಮಾಡಿ ಊರಿನ ತುಂಬ ಮೆರವಣಿಗೆ ಮಾಡುವ ಮುಖಾಂತರ ಗೌರವ ಸಲ್ಲಿಸಿದರು.