ಧಾರವಾಡ : ಜಿಲ್ಲೆಯ ಕಲಘಟಗಿ ತಾಲೂಕಿನ ಸೋಮನಕೊಪ್ಪ ಎಂಬ ಗ್ರಾಮದಲ್ಲಿನ ದ್ಯಾಮಣ್ಣ ಗುಡಿಗಾಳ ಎಂಬುವವರ ಹೊಲದಲ್ಲಿ ಲಾರಿಗೆ ಹತ್ತಿದ ಬೆಂಕಿ ಪಕ್ಕದಲ್ಲಿದ್ದ ಕಬ್ಬಿನ ಹೊಲಕ್ಕೆ ಆವರಿಸಿ, ಲಕ್ಷಾಂತರ ರೂ. ನಷ್ಟವಾಗಿರುವ ಘಟನೆ ನಡೆದಿದೆ.
ಲಾರಿಯೊಂದು ಕಬ್ಬಿನ ಹೊಲದಲ್ಲಿ ನಿಂತ ಸಂದರ್ಭದಲ್ಲಿ ಅದನ್ನು ಸ್ಟಾರ್ಟ್ ಮಾಡುವಾಗ ಏಕಾಏಕಿ ಬೆಂಕಿ ಹೊತ್ತಿಕೊಂಡಿದೆ.ಬೆಂಕಿ ಹತ್ತುತ್ತಿದ್ದಂತೆ ಇಡೀ ಲಾರಿಗೆ ಅದು ಆವರಿಸಿದೆ. ಆ ನಂತರ ಪಕ್ಕದಲ್ಲಿದ್ದ ಕಬ್ಬಿನ ಹೊಲಕ್ಕೂ ಬೆಂಕಿಯ ಕಿಡಿ ಹೊತ್ತಿಕೊಂಡಿದೆ. ಹೀಗಾಗಿ ಮೂರು ಎಕರೆ ಪ್ರದೇಶದಲ್ಲಿ ಬೆಳೆದು ನಿಂತಿದ್ದ ಕಬ್ಬು ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ.
ಇತ್ತ ಲಾರಿ ಕೂಡ ಸಂಪೂರ್ಣವಾಗಿ ಸುಟ್ಟಿದೆ. ಈ ಘಟನೆ ನಡೆದಿದೆ. ಘಟನೆಯಲ್ಲಿ ಲಾರಿ ಹಾಗೂ ಮೂರು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಕಬ್ಬು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ.
ಕೂಡಲೇ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ತೆರಳಿ, ಬೆಂಕಿ ನಂದಿಸಲು ಹರಸಾಹಸ ಪಟ್ಟು, ಮುಂದಿನ ಹೊಲಗಳಿಗೆ ಹಬ್ಬುತ್ತಿದ್ದ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಹೀಗಾಗಿ ಮತ್ತಷ್ಟು ಅನಾಹುತ ತಪ್ಪಿದಂತಾಗಿದೆ.