News Karnataka Kannada
Thursday, May 02 2024
ಹುಬ್ಬಳ್ಳಿ-ಧಾರವಾಡ

ಕೇಂದ್ರ ವರಿಷ್ಠರು ಸೂಚಿಸಿದರೆ ಸಚಿವ ಸಂಪುಟ ವಿಸ್ತರಣೆ: ಸಿಎಂ ಬೊಮ್ಮಾಯಿ

ಸಿಎಂ ಬಸವರಾಜ ಬೊಮ್ಮಾಯಿ
Photo Credit :

ಹುಬ್ಬಳ್ಳಿ: ಕೇಂದ್ರ ವರಿಷ್ಠರು ಸೂಚಿಸಿದರೆ ಸಚಿವ ಸಂಪುಟ ವಿಸ್ತರೆ ಮತ್ತು ಪುನರಚನೆ ಮಾಡಲಾಗುತ್ತದೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ನಗರದ ವಿಮಾನ ನಿಲ್ದಾಣದಲ್ಲಿ ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ ಆದೇಶದಂತೆ ಚುನಾವಣೆ ಘೋಷಿಣೆ ಮಾಡಲಾಗಿದೆ. ಆದರಿಂದ ಪಕ್ಷ ವಿಧಾನ ಪರಿಷತ್ ಮತ್ತು ರಾಜ್ಯ ಸಭಾ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿದ್ದೇವೆ. ವರಿಷ್ಠರು ಸಹ ಎಲ್ಲವನ್ನು ಗಮನಿಸುತ್ತಿದ್ದಾರೆ. ಮತ್ತೊಮ್ಮೆ ಸಂಪುಟ ವಿಸ್ತರಣೆ ಬಗ್ಗೆ ಸಂಪರ್ಕ ಮಾಡಿ ಮಾತನಾಡಿ ಮುಂದಿನ‌ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದರು.

ರಾಜ್ಯದಲ್ಲಿ ಇತ್ತೀಚೆಗೆ ನಡೆದ ಬೆಳವಣಿಗೆಗಳನ್ನು ಸರ್ಕಾರ ಸೌಹಾರ್ದತೆಯಿಂದ ಬಗೆ ಹರಿಸಿದ್ದೇವೆ. ಹಿಜಾಬ್, ಹಲಾಲ ಕಟ್ಟ, ಆಜಾನ್ ಸಮಸ್ಯೆ ನ್ಯಾಯ ಸಮ್ಮತವಾಗಿ ಪರಿಹರಿಸಲಾಗಿದೆ. ಅತ್ಯಂತ ದಕ್ಷವಾಗಿ ಆಡಳಿತ ನಡೆಸಿದ್ದೇವೆ ಎಂದು ತಿಳಿಸಿದರು.

ಹಳೆ ಮೈಸೂರ ಭಾಗದಲ್ಲಿ ಆಪರೇಷನ್ ಕಮಲ ಮಾಡುತ್ತೇವೆ ಎಂದು ಎಸ್.ಟಿ. ಸೋಮಶೇಖರ ಮತ್ತು ಜೆಡಿಎಸ್ ನ ಮುಖಂಡ ಜಿ.ಟಿ. ದೇವೆಗೌಡರನ್ನು ಭೇಟಿಯಾಗಿದ್ದಾರೆ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿ, ರಾಜಕಾರಣದಲ್ಲಿ ಬದಲಾವಣೆಗಳು ಸಹಜ ಎಂದರು.

ವಿಜೇಂದ್ರ ಅವರಿಗೆ ಎಂಎಲ್ ಸಿ ಮಾಡಿ ಮಂತ್ರಿ ಮಾಡಬೇಕು ಎಂಬ ಪ್ರಶ್ನೆ, ಹೈಕಮಾಂಡಗೆ ಬಿಟ್ಟಿದ್ದು ಎಂದು ತಿಳಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು