ಬೆಳಗಾವಿ: ಮೂಲ ಖೇಣಿದಾರರು,ಕುಮ್ಕಿ ಜಮೀನು, ಖಾನೆ, ಬಾನೇ,ಡೀಮ್ಡ್ ಅರಣ್ಯ ಸಾಗುವಳಿದಾರರ ಸಮಸ್ಯೆ ನಿವಾರಿಸಲು ಈಗಾಗಲೇ ಸಮಿತಿ ರಚಿಸಲಾಗಿದ್ದು, ರೈತರಿಗೆ ಸಹಾಯವಾಗುವಂತೆ ಕಾನೂನಾತ್ಮಕವಾಗಿ ತೀರ್ಮಾನ ಮಾಡಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ ಹೇಳಿದರು.
ಶಾಸಕರಾದ ಲಿಂಗೇಶ್ ಅವರ ಗಮನ ಸೆಳೆಯುವ ಸೂಚನೆಗೆ ಪ್ರತಿಕ್ರಿಯಿಸಿದ ಸಚಿವರು, ಈ ಜಮೀನುಗಳನ್ನು ಯಾವುದೇ ಕಾರಣಕ್ಕೂ ಕೈಗಾರಿಕೋದ್ಯಮಿಗಳಿಗೆ ನೀಡುವುದಿಲ್ಲ, ಈಗಾಗಲೇ ಸೇಂದಿ ವನಗಳನ್ನು 20-30 ವರ್ಷದಿಂದ ಸಾಗುವಳಿ ಮಾಡುತ್ತಿರುವವರಿಗೆ ಮಂಜೂರು ಮಾಡಲಾಗಿದೆ. ಅದರಂತೆ ಈ ಜಾಗಗಳನ್ನು ಕಾನೂನಾತ್ಮಕವಾಗಿ ರೈತರಿಗೆ ನೀಡುವ ಮೂಲಕ ರೈತರಿಗೆ ನ್ಯಾಯ ಒದಗಿಸಿಕೊಡಲಾಗುವುದು ಹಾಗೂ ಈಗಾಗಲೇ ರೈತರ ಮೇಲಿದ್ದ ಕೇಸುಗಳನ್ನು ಹಿಂಪಡೆಯಲಾಗಿದೆ ಎಂದರು.
ಶಾಸಕ ಕುಮಾರ್ ಬಂಗಾರಪ್ಪ ಮಾತನಾಡಿ, ಸಣ್ಣ,ಅತಿಸಣ್ಣ ಹಿಡುವಳಿದಾರರಿಗೆ ಸ್ವಾಧೀನದಲ್ಲಿರುವವರಿಗೆ ನೀಡಿ ಎಂದರು.