ಬೆಳಗಾವಿ, ಸುವರ್ಣಸೌಧ ಡಿ.22; ಬಹಳ ದಿನಗಳ ಬೇಡಿಕೆಯಾಗಿ ಉಳಿದಿದ್ದ, ಪೊಲೀಸ್ ಇಲಾಖೆಯ ಸಿಬ್ಬಂದಿಗಳಿಗೆ ನಿರ್ಬಂಧಿತ ವಾಗಿದ್ದ ಅಂತರ್ಜಿಲ್ಲ ವರ್ಗಾವಣೆ ಗೆ ಅವಕಾಶ ಕೊಡುವ ಒಂದು ಐತಿಹಾಸಿಕ ನಿರ್ಧಾರವನ್ನು ಇಂದಿನ ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ.
ಈ ಸಂಬಂಧ, ಮಾನ್ಯ ಗೃಹ ಸಚಿವ ಶ್ರೀ ಆರಗ ಜ್ಞಾನೇಂದ್ರ ರವರು ಸಂಪುಟದ ಮುಂದೆ ಪ್ರಸ್ತಾಪಿಸಿ, ಅನುಮತಿ ಕೋರಿದ್ದರು.
ಇಲಾಖೆಯಲ್ಲಿ, ಯಾವುದೇ ಒಂದು ಜಿಲ್ಲೆ ಯಲ್ಲಿ, ನೇಮಕಾತಿ ಹೊಂದಿದ ಹಾಗೂ ಅದೇ ಜಿಲ್ಲೆಯಲ್ಲಿ ಏಳು ವರ್ಷಗಳ ಕಾಲ ಸೇವೆ ಸಲ್ಲಿಸಿದ ಯಾವುದೇ ಸಿಬ್ಬಂದಿ, ಇತರೆ ಜಿಲ್ಲೆಗಳು ಅಥವಾ ತಮ್ಮ. ಸ್ವಂತ ಜಿಲ್ಲೆಗೆ, ವರ್ಗಾವಣೆ ಹೊಂದಲು, ಅರ್ಹತೆ ಪಡೆಯಲಿದ್ದಾರೆ, ಹಾಗೂ ಕೆಲವು ಷರತ್ತುಗಳು ಅನ್ವಯ ವಾಗುತ್ತವೆ.
ಅದೇ ರೀತಿಯಾಗಿ, ಪೊಲೀಸ್ ಇಲಾಖೆಗೆ ನೇಮಕವಾದ ಹಾಗೂ ಕನಿಷ್ಠ ಮೂರು ವರ್ಷಗಳ ಸೇವೆ ಸಲ್ಲಿಸಿದ, ಮಾಜಿ ಯೋಧರು, ಸಹ ಬೇರೆ ಜಿಲ್ಲೆಗೆ ವರ್ಗಾವಣೆ ಕೊರಲೂ, ಇಂದಿನ ಸಚಿವ ಸಂಪುಟ ಸಭೆಯಲ್ಲಿ ಅನುಮತಿಸಲಾಗಿದೆ.