ಬೆಳಗಾವಿ: ಜಿಲ್ಲೆಯ ಉಜ್ವಲ್ ನಗರದಲ್ಲಿನ ತಿರಂಗಾ ಕಾಲೋನಿಯಲ್ಲಿ ಅವಘಡ ಸಂಭವಿಸಿದ್ದು, ಗಾಳಿಪಟ ಹಾರಿಸುವಾಗ ಆಯತಪ್ಪಿ ಬಿದ್ದು ಬಾಲಕನೊಬ್ಬ ಸಾವನಪ್ಪಿದ್ದಾನೆ.
ಮೃತ ಬಾಲಕ 11 ವರ್ಷದ ಅರ್ಮಾನ್ ದಫೇದಾರ್, ಮನೆಯಲ್ಲಿ ಬಾಲಕ ತನ್ನ ಅಣ್ಣನ ಜೊತೆ ಗಾಳಿಪಟ ಹಾರಿಸಲೆಂದು ಮನೆಯ ಟೆರೇಸ್ ಮೇಲೆ ಹೋಗಿದ್ದಾನೆ. ಮೃತ ಬಾಲಕ ಕಾಲು ಜಾರಿ ಆಕಸ್ಮಿಕವಾಗಿ ಬಾಲಕ ಕೆಳಗೆ ಬಿದ್ದಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಿರು, ಚಿಕಿತ್ಸೆ ಫಲಿಸದೇ ಬಾಲಕ ಮೃತಪಟ್ಟಿದ್ದಾನೆ.
ಈ ಘಟನೆ ಮಾಳಮಾರುತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.