ಅಥಣಿ : ಮಾಸ್ಕ್ ಹಾಕೋದು, ಬಿಡೋದು ನನ್ನ ವೈಯಕ್ತಿಕ ವಿಚಾರ. ಯಾವುದೇ ನಿರ್ಬಂಧವಿಲ್ಲವೆಂದು ನಿನ್ನೆ ರಾತ್ರಿ ಪ್ರಧಾನಿಯೇ ಹೇಳಿದ್ದಾರೆ ಎಂದು ಸಚಿವ ಉಮೇಶ್ ಕತ್ತಿ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ.
ಬೆಳಗಾವಿ ಜಿಲ್ಲೆ ಅಥಣಿಯಲ್ಲಿ ಮಾತನಾಡಿದ ಸಚಿವ ಉಮೇಶ್ ಕತ್ತಿಗೆ ಅವ್ರಿಗೆ ಮಾಧ್ಯಮದವ್ರು ಸಚಿವರಾಗಿ ನೀವೇ ಮಾಸ್ಕ್ ಹಾಕಿಲ್ಲವಲ್ಲ ಎಂದು ಪ್ರಶ್ನಿಸಿದಾಗ ಸಚಿವರು ಬೇಜವಾಬ್ದಾರಿ ವರ್ತನೆ ಮೆರೆದಿದ್ದಾರೆ.
‘ನಿನ್ನೆ ರಾತ್ರಿ ಪ್ರಧಾನಿಯವ್ರೇ ಹೇಳಿದ್ದಾರೆ. ಯಾವುದೇ ನಿರ್ಬಂಧವಿಲ್ಲವೆಂದು ವಿಧಿಸುವುದಿಲ್ಲ. ಸ್ವಂತ ಜವಾಬ್ದಾರಿ ಹೊತ್ತು ಮಾಸ್ಕ್ ಹಾಕ್ಬೇಕು, ಹಾಕೋದು ಬಿಡೋದು ಅವ್ರಿಗೆ ಬಿಟ್ಟದ್ದು. ಆ ಪ್ರಕಾರ ನನಗೂ ಬಿಟ್ಟದ್ದು. ಹಾಗಾಗಿ ಮಾಸ್ಕ್ ಹಾಕೋದು, ಬಿಡೋದು ನನ್ನ ವೈಯಕ್ತಿಯ ವಿಚಾರ. ಮಾಸ್ಕ್ ಹಾಕಬೇಕೆಂದು ನನಗೆ ಅನಿಸಿಲ್ಲ, ಹೀಗಾಗಿ ಹಾಕಿಲ್ಲ. ಇನ್ನು ನಾನು ಮಾಸ್ಕ್ ಹಾಕದಿದ್ದರೆ ಏನೂ ತೊಂದರೆಯಾಗುವುದಿಲ್ಲ’ ಎಂದಿದ್ದಾರೆ.